​ಚಿರತೆ ದಾಳಿ: ನಾಲ್ಕು ಕುರಿಗಳ ಸಾವು

Update: 2017-03-11 17:43 GMT

ಚಿಕ್ಕಮಗಳೂರು, ಮಾ.11: ಚಿರತೆಯೊಂದು ದಾಳಿ ನಡೆಸುವ ಮೂಲಕ ನಾಲ್ಕು ಕುರಿಗಳನ್ನು ಕೊಂದಿರುವ ಘಟನೆ ಕೊಪ್ಪ ತಾಲೂಕು ಕೇಂದ್ರದ ಗಾಂಧಿನಗರದ ಜನನಿಬಿಡ ಪ್ರದೇಶದಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.
ಕೊಪ್ಪಪಟ್ಟಣದ ಗಾಂಧಿನಗರದ ಅಬ್ದುಲ್ ರಶೀದ್ ಎಂಬವರ ಮನೆಯ ಕುರಿಯ ಕೊಟ್ಟಿಗೆಯೊಳಗೆ ನುಗ್ಗಿರುವ ಚಿರತೆಯು ನಾಲ್ಕು ಕುರಿಗಳ ಮೇಲೆ ದಾಳಿ ನಡೆಸಿದೆ ಎನ್ನಲಾಗಿದೆ.


ಸ್ಥಳಕ್ಕೆ ಕೊಪ್ಪವಲಯ ಅರಣ್ಯಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತ ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಿ ಚಿರತೆಯ ಪತ್ತೆಗಾಗಿ ಹುಡುಕಾಟ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News