ಓ... ಮೆಣಸೇ ....

Update: 2017-03-12 18:56 GMT

   
ಜಿಡಿಪಿ ಹೆಚ್ಚಳ ಅಂಕಿ ಅಂಶಗಳು ಸುಳ್ಳಿನ ಕಂತೆ

- ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ಕಾಂಗ್ರೆಸ್ ನಾಯಕ
 ಅದು ಸುಳ್ಳಾದರೇನಂತೆ, ಉತ್ತರ ಪ್ರದೇಶದಲ್ಲಿ ಬಿಜೆಪಿ ಪಡೆದ ಸ್ಥಾನಗಳು ನಿಜವಲ್ಲವೇ?
---------------------
  ಗಾಂಧೀಜಿಯನ್ನು ಕೊಂದದ್ದು ಬಿಜೆಪಿಯವರು

-ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ
 ಅವರ ಚಿಂತನೆಗಳನ್ನು ಕೊಂದವರ ಸಾಲಿನಲ್ಲಿ ಇನ್ನಷ್ಟು ಜನರಿದ್ದಾರೆ.

---------------------
   
5 ವರ್ಷಗಳ ಹಿಂದೆ ನನ್ನನ್ನು ಕೆಟ್ಟವನು, ಕೊಲೆಗಡುಕ, ಭೂ ಕಬಳಿಕೆ ಮಾಡುವವನು ಎಂದು ಬಿಂಬಿಸುತ್ತಿದ್ದರು

- ರಮೇಶ್‌ಕುಮಾರ್, ಸಚಿವ
 ನಿಮಗೆ ಸಚಿವ ಸ್ಥಾನ ನೀಡಲು ಅದುವೇ ಮಾನದಂಡವಾಗಿರಬಹುದೇ?
---------------------
  
ದೇವರು ಮತ್ತು ಸಾವನ್ನು ಧೈರ್ಯದಿಂದ ಎದುರಿಸುವವನೇ ನಿಜವಾದ ವೈದ್ಯ

- ಡಾ. ಚಂದ್ರಶೇಖರ ಕಂಬಾರ, ಹಿರಿಯ ಸಾಹಿತಿ
 ಪೇಜಾವರಶ್ರೀಗಳ ಪಾದಪದ್ಮಗಳಿಗೆ ಸಾಷ್ಟಾಂಗ ಬೀಳುವವರನ್ನು ಜ್ಞಾನಪೀಠಿಗಳೆಂದು ಕರೆಯಬೇಕೇ?
---------------------
  
ನಾನು ಕೆಪಿಸಿಸಿ ಹುದ್ದೆಯ ಆಕಾಂಕ್ಷಿಯಲ್ಲ

-ಡಿ.ಕೆ. ಶಿವಕುಮಾರ್, ಸಚಿವ
 ನೀವು ಯಾವುದರ ಆಕಾಂಕ್ಷಿ ಎಂದು ತಿಳಿದಿರುವ ಸಿದ್ದರಾಮಯ್ಯ ಅಸಮಾಧಾನದಿಂದ ಕನಲಿದರಂತೆ.

---------------------
   ಪ್ರಧಾನಿ ಮೋದಿ ಸ್ವಲ್ಪ ಕೆಲಸ ಮಾಡಿ ಜೋರು ಸದ್ದು ಮಾಡುತ್ತಾರೆ
- ಅಖಿಲೇಶ್ ಯಾದವ್, ಉತ್ತರಪ್ರದೇಶ ಮುಖ್ಯಮಂತ್ರಿ
ನಿಮ್ಮದು ಕೆಲಸವೂ ಇಲ್ಲ, ಸದ್ದೂ ಇಲ್ಲ.

ನಾನು ಸಿನೆಮಾಗಳಲ್ಲಿ ಮಾಡಿರುವುದೆಲ್ಲವೂ ಒರಿಜನಲ್ - ಸಂಜಯ್ ದತ್, ಬಾಲಿವುಡ್ ನಟ

ಬಹುಶ ಸಿನೆಮಾದ ಹೊರಗಡೆ ಮಾಡಿದ್ದೆಲ್ಲ ನಕಲಿ ಇರಬೇಕು.

---------------------

  ಬಿಜೆಪಿಯದ್ದು ಗುದ್ದಿ ಓಡುವ ರಾಜಕಾರಣ
 - ಬಿ.ಕೆ. ಹರಿಪ್ರಸಾದ್, ಎಐಸಿಸಿ ಪ್ರಧಾನ ಕಾರ್ಯದರ್ಶಿ
 ಯಾಕೆ, ನಿಮಗೆ ಒಂದು ಗುದ್ದು ಸಾಕಾಗುವುದಿಲ್ಲ ಎನ್ನುತ್ತೀರಾ?
---------------------
 
ನಮ್ಮದು ಯಡಿಯೂರಪ್ಪ ಗುಂಪೂ ಅಲ್ಲ, ಈಶ್ವರಪ್ಪ ಗುಂಪೂ ಅಲ್ಲ, ಬಿಜೆಪಿ ಗುಂಪು

- ಭಾನುಪ್ರಕಾಶ, ಬಿಜೆಪಿ ಮುಖಂಡ
 ರಾಯಣ್ಣ ಗುಂಪಾ? ಕಿತ್ತೂರು ಚೆನ್ನಮ್ಮ ಗುಂಪಾ ಎನ್ನುವುದನ್ನು ಸ್ಪಷ್ಟಪಡಿಸಿದರೂ ಸಾಕು.
---------------------
  
ಸ್ಮಾರ್ಟ್‌ಸಿಟಿ ಯೋಜನೆಯಿಂದಾಗಿ ಮಂಗಳೂರು ಸಿಟಿ ಇಡೀ ರಾಜ್ಯದ ನಗರವಾಗಲಿದೆ

- ಆಸ್ಕರ್ ಫೆರ್ನಾಂಡಿಸ್, ರಾಜ್ಯಸಭಾ ಸದಸ್ಯ
 
ಅಂದರೆ ಮಂಗಳೂರು ನಗರದ ಕೋಮುವಾದ ಇಡೀ ರಾಜ್ಯಕ್ಕೆ ಹರಡಲಿದೆ ಎಂದಾಯಿತು.

---------------------
  
ಧರ್ಮವನ್ನು ನಾವು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ

- ನಳಿನ್‌ಕುಮಾರ್ ಕಟೀಲು, ಸಂಸದ
 
ನಿಮ್ಮನ್ನು ಅಧರ್ಮ ರಕ್ಷಿಸುತ್ತಿರುವುದರಿಂದ ನೀವು ಯಾವುದನ್ನು ರಕ್ಷಿಸಿರುವುದು ಎನ್ನುವುದು ಗೊತ್ತಾಗುತ್ತದೆ.

---------------------
  
ನಮ್ಮ ಧರ್ಮಯುದ್ಧ ಹಲವು ತಿರುವುಗಳನ್ನು ಪಡೆಯಲಿದೆ

- ಪನ್ನೀರ್ ಸೆಲ್ವಂ, ತಮಿಳುನಾಡು ಮಾಜಿ ಮುಖ್ಯಮಂತ್ರಿ
 
ಹೌದು, ತಿರುವಿನಲ್ಲಿ ನಿಮ್ಮನ್ನು ಬಿಜೆಪಿ ನಾಯಕರು ಕಾಯುತ್ತಿದ್ದಾರೆ ಎನ್ನುವುದು ಇಡೀ ತಮಿಳುನಾಡಿಗೇ ಗೊತ್ತು.

---------------------
  
ಕಾಲಿಗೆ ಬೀಳುವುದು ವಿಕೃತ ಸಂಸ್ಕೃತಿ

- ಕೆ.ಎಸ್.ಈಶ್ವರಪ್ಪ, ವಿ.ಪ.ವಿ. ನಾಯಕ
 ಕಾಲೆಳೆಯುವುದು?
---------------------
  
ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕು ಅಂತ ಹೋರಾಟ ಮಾಡಿದವರಲ್ಲಿ ನಾನೂ ಒಬ್ಬ

- ಸತೀಶ್ ಜಾರಕಿಹೊಳಿ, ಮಾಜಿ ಸಚಿವ
 ಅದಕ್ಕಾಗಿ ಈಗ ಅವರು ನಿಮ್ಮನ್ನು ಮುಖ್ಯಮಂತ್ರಿ ಮಾಡಬೇಕೇ?
---------------------
  ಇಲ್ಲದ ಸಮಸ್ಯೆ ಸೃಷ್ಟಿಸಿ ಚಾಣಾಕ್ಷ ತಂತ್ರ ಪ್ರಯೋಗ ಮಾಡುವುದರಲ್ಲಿ ಬಿಜಿಪಿಯವರು ನಿಸ್ಸೀಮರು
- ದೇವೇಗೌಡ, ಮಾಜಿ ಪ್ರಧಾನಿ
 ಅವರದು ತಂತ್ರ, ನಿಮ್ಮದು ಮಂತ್ರ.

---------------------
  ನಾನು ಕಾಂಗ್ರೆಸ್ ನಿಷ್ಠ

- ಎಚ್. ವಿಶ್ವನಾಥ್, ಮಾಜಿ ಸಂಸದ

ಸದ್ಯಕ್ಕೆ ಅದೇ ಕಾಂಗ್ರೆಸ್ ಪಾಲಿನ ಕಷ್ಟ.

---------------------
  
ಜಗತ್ತಿನಲ್ಲಿ ಭಾರತಕ್ಕೆ ಗೌರವ ಬರಲು ಮೋದಿ ನಾಯಕತ್ವವೇ ಕಾರಣ

- ಜಗದೀಶ್ ಶೆಟ್ಟರ್, ವಿರೋಧ ಪಕ್ಷದ ನಾಯಕ
 ಆ ಗೌರವಕ್ಕಾಗಿ ಬಡವರು ತೆತ್ತ ಬೆಲೆ ಬಹುದೊಡ್ಡದು.

---------------------
  ಗೋವುಗಳಿಗೆ ಸ್ವಾತಂತ್ರ ಅಗತ್ಯ
- ರಾಘವೇಶ್ವರಭಾರತಿ ಸ್ವಾಮೀಜಿ, ರಾಮಚಂದ್ರಾಪುರ ಮಠ
 ಹೌದು, ಪ್ರತಿದಿನ ಅದರ ಕೆಚ್ಚಲಿಗೆ ಕೈ ಹಾಕಿ ನಡೆಸುವ ಲೈಂಗಿಕ ದೌರ್ಜನ್ಯ ನಿಲ್ಲಬೇಕು.

---------------------
  
ಹಿಂದಿನ ಬಿಜೆಪಿ ಸರಕಾರ 6 ತಿಂಗಳಿಗೊಮ್ಮೆ ಮಂತ್ರಿಯನ್ನು ಬದಲಾಯಿಸುತ್ತಾ ಜನರಿಗೆ ಮನರಂಜನೆ ನೀಡುತ್ತಿತ್ತು - ಯು.ಟಿ. ಖಾದರ್, ಸಚಿವ
ದಿನಾ ಪತ್ರಿಕೆಗಳಲ್ಲಿ ಒಂದೇ ಮುಖವನ್ನು ನೋಡುವ ಜನರ ಕಷ್ಟಕ್ಕಿಂತ ಬದಲಾವಣೆಯೇ ವಾಸಿ.

---------------------
  ಯಾವುದೇ ಕೆಲಸದ ಫಲಿತಾಂಶ ತಕ್ಷಣ ಸಿಗುವುದಿಲ್ಲ
 - ಜಯಪ್ರಕಾಶ್ ಹೆಗ್ಡೆ, ಮಾಜಿ ಸಚಿವ
ಹೌದು, ಬಿಜೆಪಿ ಸೇರಿದ ಬಂಗಾರಪ್ಪರಿಗೂ ಫಲಿತಾಂಶ ಗೊತ್ತಾಗುವಾಗ ತಡವಾಗಿತ್ತು.

---------------------
  ಮತದಾರರು ಯಡಿಯೂರಪ್ಪನವರ ಜೇಬಿನಲ್ಲಿಲ್ಲ
 - ಸಿದ್ದರಾಮಯ್ಯ, ಮುಖ್ಯಮಂತ್ರಿ
 ಹೌದು, ನೋಟು ನಿಷೇಧದ ಬಳಿಕ ಜೇಬಿನಲ್ಲಿ ಏನನ್ನೂ ಇಟ್ಟುಕೊಳ್ಳುವಂತಿಲ್ಲ.

---------------------

ವಿದೇಶಗಳಲ್ಲಿರುವ ಎಲ್ಲ ಭಾರತೀಯರ ಸುರಕ್ಷೆಗೆ ಕ್ರಮ ಕೈಗೊಳ್ಳುತ್ತೇವೆ

- ರಾಜನಾಥ ಸಿಂಗ್, ಕೇಂದ್ರ ಸಚಿವ

ಭಾರತದಲ್ಲಿರುವ ಭಾರತೀಯರ ಸುರಕ್ಷೆಗೆ ಕ್ರಮ ಯಾವಾಗ?

---------------------
  ಕಾಂಗ್ರೆಸ್ ಕುಸಿಯುತ್ತಿರುವ ನೆಲ
 - ಕುಮಾರ ಬಂಗಾರಪ್ಪ, ಮಾಜಿ ಸಚಿವ
 ಆ ನೆಲದ ಫಸಲನ್ನು ಕೊಯ್ದು ಬರಡು ಮಾಡಿದವರ ಹತಾಶೆ.

---------------------
  ಮಹಿಳೆಯರು ಸಮಾನತೆಯ ಭ್ರಮೆಯಲ್ಲಿ ಎಲ್ಲೆ ಮೀರಬಾರದು
- ಶಕುಂತಳಾ ಶೆಟ್ಟಿ, ಶಾಸಕಿ
 ಅದಕ್ಕೇ ಇರಬೇಕು ಆಗಾಗ ಗುಟ್ಟಾಗಿ ಆರೆಸ್ಸೆಸ್ ಮಹಿಳಾ ಕಚೇರಿಗೆ ಭೇಟಿ ನೀಡುವುದು.

---------------------
  
ಚುನಾವಣೆ ಮಾದರಿಯಲ್ಲಿ ಪಿಯು ಪರೀಕ್ಷೆ ನಡೆಸಲಾಗುತ್ತಿದೆ

- ತನ್ವೀರ್ ಸೇಠ್, ಸಚಿವ
 ಅಂದರೆ ಅಕ್ರಮಗಳಿಗೆ ಪೂರ್ಣ ಅನುಮತಿ.

Writer - ಪಿ.ಎ. ರೈ

contributor

Editor - ಪಿ.ಎ. ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...