ಎ.1ರಿಂದ ‘ಮಾತೃಪೂರ್ಣ’ ಯೋಜನೆ ಜಾರಿ
Update: 2017-03-13 04:23 GMT
ಬೆಂಗಳೂರು, ಮಾ.13: ಗರ್ಭಿಣಿ, ಬಾಣಂತಿಯರಿಗೆ ಪೌಷ್ಠಿಕತೆಯನ್ನು ನೀಡುವ ಕ್ರಮವಾಗಿ ರಾಜ್ಯ ಸರಕಾರ ಎಪ್ರಿಲ್ 1 ರಿಂದ ಪ್ರಾಯೋಗಿಕವಾಗಿ ನಾಲ್ಕು ತಾಲೂಕುಗಳಲ್ಲಿ ಮಾತೃಪೂರ್ಣ ಯೋಜನೆಯನ್ನು ಜಾರಿಗೆ ತರಲು ನಿರ್ಧರಿಸಿದೆ.
ರಾಜ್ಯದ ಮೈಸೂರಿನ ಎಚ್.ಡಿ. ಕೋಟೆ, ತುಮಕೂರಿನ ಮಧುಗಿರಿ, ಬಾಗಲಕೋಟೆಯ ಜಮಖಂಡಿ ಹಾಗೂ ರಾಯಚೂರು ಜಿಲ್ಲೆಯ ಮಾನವಿ ತಾಲೂಕುಗಳ ಅಂಗನವಾಡಿ ಕೇಂದ್ರಗಳಲ್ಲಿ ಮಧ್ಯಾಹ್ನದ ಬಿಸಿಯೂಟ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ.