ಶ್ರೀಧರ ಭಟ್

Update: 2017-03-13 18:37 GMT

ಮೂಡುಬಿದಿರೆ, ಮಾ.13: ನಿವೃತ್ತ ಶಿಕ್ಷಕ, ಕೃಷಿಕ ಕಡಂದಲೆ ಜೋಡುಕಟ್ಟೆ ಜಾಯಿಲೆ ಕೆ. ಶ್ರೀಧರ ಭಟ್(92) ಮಾ.11ರಂದು, ಪುತ್ರ ಮೂಡುಬಿದಿರೆಯ ಹಿರಿಯ ನ್ಯಾಯವಾದಿ ಕೆ.ಆರ್. ಪಂಡಿತ್ ಅವರ ಕಡಂದಲೆಯ ಮನೆಯಲ್ಲಿ ನಿಧನ ಹೊಂದಿದರು.

 ಮೃತರು ಕೆ.ಆರ್.ಪಂಡಿತ್ ಸಹಿತ ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಅವರು ಕಡಂದಲೆ ಶಾಲೆಯಲ್ಲಿ 40 ವರ್ಷ ಸೇವೆ ಸಲ್ಲಿಸಿ 1981ರಲ್ಲಿ ನಿವೃತ್ತರಾಗಿದ್ದರು. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಮೂಡುಬಿದಿರೆಯ ಎಸ್.ಅಬ್ದುಲ್ ನಝೀರ್, ಮೂಡುಬಿದಿರೆ ವಕೀಲರ ಸಂಘದ ಅಧ್ಯಕ್ಷ ಎಂ.ಬಾಹುಬಲಿ ಪ್ರಸಾದ್, ಪದಾಧಿಕಾರಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ದಯಾನಂದ ಪೈ
ಕೇಶವ ಮಂಚಿ
ನೂರ್ ಜಹಾನ್
ಸಿ.ಸುಂದರ್