×
Ad

ಬೆಳಗ್ಗೆ 11:30ಕ್ಕೆ ರಾಜ್ಯ ಬಜೆಟ್ ಮಂಡನೆ

Update: 2017-03-15 10:28 IST

 ಬೆಂಗಳೂರು, ಮಾ.15: ಮುಖ್ಯ ಸಿದ್ದರಾಮಯ್ಯ ಅವರು ಇಂದು ಬೆಳಗ್ಗೆ 11:30ಕ್ಕೆ ರಾಜ್ಯ ಮುಂಗಡಪತ್ರವನ್ನು ವಿಧಾನಸಭೆಯಲ್ಲಿ ಮಂಡಿಸಲಿದ್ದಾರೆ.
ಇದು ರಾಜ್ಯ ಸರಕಾರದ ಐದನೆ ಬಜೆಟ್  ಮತ್ತು ಸಿದ್ದರಾಮಯ್ಯ ಅವರು ಹಣಕಾಸು ಸಚಿವರಾಗಿ 12ನೇ  ಬಜೆಟ್‌ ಮಂಡಿಸಲಿದ್ದಾರೆ. 
ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ಬೆನ್ನಲ್ಲೇ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2017-18ನೇ ಸಾಲಿನ ಬಜೆಟ್ ಮಂಡಿಸುತ್ತಿದ್ದು, ತೀವ್ರ ಕುತೂಹಲ ಕೆರಳಿಸಿದೆ.
ಇದೇ ಮೊದಲ ಬಾರಿ ಶುಕ್ರವಾರದ  ಬದಲಾಗಿ ಬುಧವಾರ ಬಜೆಟ್ ಮಂಡನೆ ಯಾಗುತ್ತಿದೆ  ಬಜೆಟ್ ನ ಗಾತ್ರ 2 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದ್ದು, ರಾಜ್ಯ ವಿಧಾನಸಭೆ ಚುನಾವಣೆ ಹಾಗೂ ಮುಂದಿನ ತಿಂಗಳು ನಡೆಯಲಿರುವ ಉಪ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು  ಜನಪ್ರಿಯ ಬಜೆಟ್ ಮಂಡಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಕೃಷಿ ಕ್ಷೇತ್ರ, ಕೈಗಾರಿಕೆಗಳಿಗೆ ಉತ್ತೇಜನ, ಅನ್ನಭಾಗ್ಯ ಯೋಜನೆ ಮತ್ತು  ಕ್ಷೀರಭಾಗ್ಯ ಸೇರಿದಂತೆ ಜನಪ್ರಿಯ ಯೋಜನೆಗಳಿಗೂ ಸಂಪನ್ಮೂಲ  ಕ್ರೋಢಿಕರಣ, ತಮಿಳುನಾಡಿನ   ಮಾದರಿಯಲ್ಲಿ  ಬೆಂಗಳೂರಿನಲ್ಲಿ  "ನಮ್ಮ ಕ್ಯಾಂಟಿನ್”, ರೈತರ ಸಾಲ ಮನ್ನಾ ಮಾಡುವ ಯೋಜನೆಯನ್ನು ಬಜೆಟ್ ನಲ್ಲಿ ನಿರೀಕ್ಷಿಸಲಾಗಿದೆ.

ನಾಡಿನ ಸಮಗ್ರ ವಿಕಾಸಕ್ಕೆ ಕಾರಣವಾಗುವ ಬಜೆಟ್‌ ಮಂಡಿಸುವುದಾಗಿ ಸಿಎಂ ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News