ಚುನಾವಣಾ ಪ್ರಚಾರದ ವೇಳೆ ಯಡಿಯೂರಪ್ಪರಿಂದ ಆಣೆ-ಪ್ರಮಾಣ

Update: 2017-03-23 09:32 GMT

ಚಾಮರಾಜನಗರ, ಮಾ.23: ಗುಂಡ್ಲುಪೇಟೆ ಕ್ಷೇತ್ರದ ಉಪ ಚುನಾವಣೆಯ ಪ್ರಚಾರದಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಮತದಾರರಿಂದ ಆಣೆ-ಪ್ರಮಾಣ ಮಾಡಿಸಿಕೊಂಡಿರುವ ಘಟನೆ ನಡೆದಿದೆ.

  ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದಲ್ಲಿ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಬಿಎಸ್‌ವೈ ಗುಂಡ್ಲುಪೇಟೆಯ ಬಿಜೆಪಿ ಅಭ್ಯರ್ಥಿ ನಿರಂಜನ್ ಕುಮಾರ್‌ಗೆ ಬೆಂಬಲಿಸುತ್ತೇವೆ ಎಂದು ದೇವರ ಮೇಲೆ ಪ್ರಮಾಣ ಮಾಡುವಂತೆ ಮತದಾರರನ್ನು ಆಗ್ರಹಿಸಿದ್ದಾರೆ.

ನಾನು ಆಡಿದ ಮಾತಿಗೆ ತಪ್ಪಲ್ಲ, ನಂಬಿಕೆ ದ್ರೋಹ ಮಾಡಲ್ಲ. ನಿರಂಜನ್ ಕುಮಾರ್‌ರನ್ನು ಬೆಂಬಲಿಸುತ್ತೇವೆ ಎಂದು ದೇವರ ಮೇಲೆ ಪ್ರಮಾಣ ಮಾಡಿ ಕೈಎತ್ತಿ ಎಂದ ಯಡಿಯೂರಪ್ಪ ‘ದೇವರ ಮೇಲೆ ಪ್ರಮಾಣ ಮಾಡುವೆ, ಆಡಿದ ಮಾತು ತಪ್ಪಲ್ಲ ಎಂದು ಜನರಿಂದ ಆಣೆ-ಪ್ರಮಾಣ ಮಾಡಿಸಿಕೊಂಡರು. ‘‘ಬಿಜೆಪಿ ಅಧಿಕಾರಕ್ಕೆ ಬಂದರೆ ಗುಂಡ್ಲುಪೇಟೆಯನ್ನು ದತ್ತು ಪಡೆದು ಅಭಿವೃದ್ದಿ ಪಡಿಸುವೆ. ಅಭಿವೃದ್ಧಿ ಮಾಡುವುದಾಗಿ ರಕ್ತದಲ್ಲಿ ಬರೆದುಕೊಡುವೆ. ರಾಜ್ಯದ ಜನರು ತಾನೇ ಮುಖ್ಯಮಂತ್ರಿಯಾಗಬೇಕೆಂದು ಬಯಸುತ್ತಿದ್ದಾರೆ’’ಎಂದು ಬಿಎಸ್‌ವೈ ಇದೇ ವೇಳೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News