ಮಲೆನಾಡಿನ ಜನರನ್ನು ದಿಕ್ಕೆಡಿಸಿದ ಕಸ್ತೂರಿ ರಂಗನ್ ವರದಿ
ಚಿಕ್ಕಮಗಳೂರು, ಮಾ.23: ಡಾ.ಕಸ್ತೂರಿ ರಂಗನ್ ವರದಿಯಲ್ಲಿ ಕಾಣಿಸಿಕೊಂಡಿರುವ ಪಶ್ಚಿಮಘಟ್ಟ ಪ್ರದೇಶ ವ್ಯಾಪ್ತಿಗೊಳಪಟ್ಟಿರುವ ಚಿಕ್ಕಮಗಳೂರು, ಮೂಡಿಗೆರೆ, ಕೊಪ್ಪ, ಎನ್.ಆರ್.ಪುರ ಮತ್ತು ಶೃಂಗೇರಿ ತಾಲೂಕುಗಳ ನೂರಾರು ಗ್ರಾಮಗಳನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸಿ ಕೇಂದ್ರ ಸರಕಾರ 2ನೆ ಬಾರಿಗೆ ಕರಡು ಅಧಿಸೂಚನೆ ಹೊರಡಿಸಿದೆ. ಈ ಪಟ್ಟಿಯಲ್ಲಿ ಜಿಲ್ಲೆಯ ಒಟ್ಟು 147 ಹಳ್ಳಿಗಳು ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
ಕಸ್ತೂರಿ ರಂಗನ್ ವರದಿ ಸೂಕ್ಷ್ಮ ಪ್ರದೇಶದಲ್ಲಿರುವ ಹಳ್ಳಿಗಳ ಹೆಸರುಗಳು ಸ್ಥಳೀಯರನ್ನು ದಿಕ್ಕೆಡುವಂತೆ ಮಾಡಿದೆ. ರಾಜ್ಯ ಸರಕಾರ ಈಗ ಕೇರಳ ರಾಜ್ಯದ ಮಾದರಿಯಲ್ಲಿ ಕೇಂದ್ರಕ್ಕೆ ವಿರೋಧ ವ್ಯಕ್ತಪಡಿಸಬೇಕು ಎಂದು ಸ್ಥಳೀಯರ ಒಕ್ಕೊರಲ ಒತ್ತಾಯಗಳು ಕೇಳಿ ಬರುತ್ತಿವೆ. ಈ ಹಳ್ಳಿಗಳನ್ನು ಸೂಕ್ಷ್ಮ ಪ್ರದೇಶ ಎಂದು ಘೋಷಣೆಯಾಗುವ ಹಂತದಲ್ಲಿ ಸಂಸದರು ಸದನದಲ್ಲಿ ಧ್ವನಿ ಎತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಕ್ಕಮಗಳೂರು ತಾಲೂಕು ವ್ಯಾಪ್ತಿಯಲ್ಲಿ ಮಾಡ್ಲ, ಬಾಬಾಬುಡಾನ್ ಗಿರಿ, ಚುರ್ಚೆ ಗುಡ್ಡ ಕಾವಲು, ಬೊಗಸೆ, ಬಾಸಾಪುರ, ಕಡವಂತಿ, ಬೆರಣಗೋಡು, ಹುಯಿಗೆರೆ, ಬಸರವಳ್ಳಿ, ಮೇಲಗಿರಿ, ಕೆಸುವಿನಮನೆ, ಹಿಪ್ಲ, ಹೆಗ್ಗರಮತ್ತವಾನಿ, ಅತ್ತಿಗಿರಿ, ಮೇಲಿನಹುಲುವತ್ತಿ, ಕೆಸವೆ, ಸುಗುಡವಾನಿ, ಸಿರಗೊಳ, ಕೊಳಗಾಮೆ, ಜಾಗರ, ಶಿರವಾಸೆ, ಬಿದರೆ, ಮಲಗಾರು, ಸಾರಗೋಡು, ಮಣಬೂರು, ಅರೆನೂರು, ಬಿಕ್ಕರಣೆಗಳನ್ನು ಸೂಕ್ಷ್ಮ ಪ್ರದೇಶಗಳೆಂದು ಕೇಂದ್ರ ಸರಕಾರ ಗುರುತಿದೆ.
ಮೂಡಿಗೆರೆ ತಾಲೂಕು ಸಂಸೆ, ಇಡಕಣಿ, ಕೆಳಗೂರು, ತನೂಡಿ, ಹೊರನಾಡು, ಕಲಕೋಡು, ಬಾಳೂರು, ಅತ್ತಿಗೆರೆ, ತರುವೆ, ಬಾರಿಮಲೆ ಎಸ್ಟೇಟ್, ಕೋಗಿಲೆ, ಗುತ್ತಿ, ಮೂಲರಹಳ್ಳಿ, ಊರುಬಗೆ, ಹೊಸಕೆರೆ, ಬೈರಾಪುರ, ಮೇಕನಗದ್ದೆ, ಬೈರಾಪುರ ಎಸ್ಟೇಟ್, ಕುಂದೂರು, ದರ್ಶನ, ಅರಮನೆ ತಲಗಾರು, ಹೆಗ್ಗುಡ್ಲು, ತತ್ಕೊಳ, ಕೆಂಜಿಗೆ ಎಸ್ಟೇಟ್, ದುರ್ಗದಹಳ್ಳಿ, ಮದುಗುಂಡಿ ಪಟ್ಟಿಯಲ್ಲಿರುವ ಹಳ್ಳಿಗಳಾಗಿವೆ. ಶೃಂಗೇರಿ ತಾಲೂಕು ವ್ಯಾಪ್ತಿಯ ಮರ್ಕಲ್, ಮಸಿಗೆ, ಯಡದಳ್ಳಿ, ನೀಲಂದೂರು, ಅತನಬಾಳು, ಕುಂಬರಗೋಡು, ಮಸಿಗೆ, ಮೀಗ, ಯಡದಾಳು, ಬಾಳೆಕಡಿ, ನೆಮ್ಮಾರು, ಕೆರೆ, ಸುಂಕದಮಕ್ಕಿ, ಮಲನಾಡು, ನೆಮ್ಮಾರ್ ಎಸ್ಟೇಟ್, ಗುಲಗಂಜಿಮನೆ, ಹಾಡಿ, ಮಾಸುವಳ್ಳಿ ಎಸ್ಟೇಟ್, ಬಾಳಗೆರೆ, ಬಳಗೆರೆ, ಶೀರ್ಲು, ಮುಡುಬ, ಮಲನಾಡು, ಗಿಣಿಕಲ್, ಕೂತಗೋಡು, ಕೆರೆ ಹಳ್ಳಿಗಳನ್ನು ಕೇಂದ್ರ ಸರಕಾರ ಸೂಕ್ಷ್ಮ ಪ್ರದೇಶಗಳ ಪಟ್ಟಿಗೆ ಸೇರಿಸಿದೆ
ಕೊಪ್ಪತಾಲೂಕಿನ ಕೆಸವೆ, ಕುಂಬರಕೊಪ್ಪ, ದೇವರಹಳ್ಳಿ, ಹೊಸೂರು, ಉಡಣ, ಮಸಿಕೊಪ್ಪ, ಕರಿಮನೆ, ಬೆಳವಡಿ, ಲೋಕನಾಥಪುರ, ದಯಂಬಳ್ಳಿ, ಅಡಿಗೆಬೈಲು, ಹೆಗ್ಗಾರು, ಹುಲಿಗರಡಿ, ದೇವಗೋಡು, ಹರಳಾನೆ, ಕಗ್ಗ, ಹೊನಗಾರು, ಕೆಳಕುಳಿ, ಗುಣವಂತೆ, ಹಿರೇಕೊಡಿಗೆ, ಬೊಳಪುರ, ಭಂಡಿಗಡಿ, ಬಿಳಗದ್ದೆ, ಮೇಗೂರು, ಕಲ್ಲುಗುಡ್ಡೆ, ತಲಮಕ್ಕಿ ಎಸ್ಟೇಟ್, ಅದ್ದಡ, ನುಗ್ಗಿ, ಶಂಕರಪುರ, ಹೆಗ್ಗಾರು, ಕುಂಚೂರು, ಮರಿತೊಟ್ಲು ಹಳ್ಳಿಗಳು ಪಟ್ಟಿಯಲ್ಲಿವೆ. ನರಸಿಂಹರಾಜಪುರ ತಾಲೂಕು ವ್ಯಾಪ್ತಿಯ ಆರಂಬಳ್ಳಿ, ಮಲ್ಲಂದೂರು, ವಿಠಲ, ಸಂಕ್ಸೆ, ಬಾಳೆ, ಬೈರಾಪುರ, ಕುಸಬೂರು, ಕೋಣಕೆರೆ, ಮಡಬೂರು, ಸಾಲೂರು, ಹೆಬ್ಬೆ, ಸಾರ್ಯ, ಕಾನೂರು, ವಗ್ಗಡೆ, ಹೊಸೂರು, ಮೇಗರಮಕ್ಕಿ, ಕಡಹಿನಬೈಲು, ಹಾತೂರು, ಬೆಳ್ಳೂರು, ದಂಡುಬಿಟ್ಟಹರ, ಕೊನೊಡಿ, ನಂದಿಗಾವೆ, ಗುಬ್ಬಿಗ, ಅರಳಿಕೊಪ್ಪ, ವರ್ಕಾಟೆ, ಮುದುಗುಣಿ, ಹಲಸೂರು, ಹರವರಿ, ಆಲೆಹಳ್ಳಿ, ದಾವಣ, ಕರ್ಕೇಶ್ವರ ಸೇರಿದಂತೆ ವಿವಿಧ ಹಳ್ಳಿಗಳನ್ನು ಸೂಕ್ಷ್ಮ ಪ್ರದೇಶದ ಪಟ್ಟಿಗೆ ಸೇರಿಸಲಾಗಿದೆ.