ಸಿಎಂ ಸಿದ್ದರಾಮಯ್ಯ ಮನೆಯಲ್ಲಿ ಯುಗಾದಿ ಸಂಭ್ರಮವಿಲ್ಲ

Update: 2017-03-29 04:02 GMT

ಬೆಂಗಳೂರು, ಮಾ.29: ಮುಖ್ಯ ಮಂತ್ರಿ ಸಿದ್ದರಾಮಯ್ಯ ಮನೆಯಲ್ಲಿ ಇಂದು ಯುಗಾದಿ ಸಂಭ್ರಮವಿಲ್ಲ. ಶುಭ ಕೋರಲು ಬಂದವರಿಗೆ ಸಿಹಿ ವಿತರಿಸಲಾಗುತ್ತಿದೆ.
ಮಗ ರಾಕೇಶ್‌ ನಿಧನರಾಗಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಒಂದು ವರ್ಷದ ತನಕ ಮನೆಯಲ್ಲಿ ಯಾವುದೇ ಹಬ್ಬವನ್ನು  ಆಚರಣೆ ಮಾಡದಿರುವ ನಿರ್ಧಾರ ಕೈಗೊಂಡಿದ್ದಾರೆ. ಅವರ ಕುಟುಂಬಸ್ಥರು ಯುಗಾದಿ ಹಬ್ಬ ಆಚರಿಸುತ್ತಿಲ್ಲ.
ಸಿಎಂ ಅಧಿಕೃತ ನಿವಾಸಿ ಕಾವೇರಿಯಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯಗೆ ಯುಗಾದಿ ಶುಭ ಕೋರಲು ಬರುವ ಜನಪ್ರತಿನಿಧಿಗಳು, ಅಧಿಕಾರಿಗಳು ಪಕ್ಷದ ಕಾರ್ಯಕರ್ತರು ಅಭಿಮಾನಿಗಳಿಗೆ ಹೋಳಿಗೆ ವಿತರಣೆ ಮಾಡಲಾಗುತ್ತಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News