×
Ad

ಕಿಡ್ನಿ ವೈಫಲ್ಯ; ಸಹಾಯಕ್ಕೆ ವಿನಂತಿ

Update: 2017-03-30 22:05 IST

ಸಾಗರ,ಮಾ.30: ಹಣ್ಣಿನ ವ್ಯಾಪಾರಿಯಾಗಿ ಜೀವನ ನಡೆಸಿದ್ದ ನಗರದ ಎಸ್.ಎನ್.ನಗರದ ನಿವಾಸಿ 33 ವರ್ಷದ ಯೂಸುಫ್ ಅವರು ಕಿಡ್ನಿ ವೈಫಲ್ಯಕ್ಕೊಳಗಾಗಿದ್ದು, ತೀರಾ ಬಡತನದಲ್ಲಿರುವ ಅವರು ಕಿಡ್ನಿ ಟ್ರಾನ್ಸ್‌ಪ್ಲಾಂಟೇಷನ್ ಸಂಬಂಧ ತಗುಲಲಿರುವ ಸುಮಾರು 8 ಲಕ್ಷ ರೂ.ಗಳಷ್ಟು ಖರ್ಚನ್ನು ಭರಿಸಲು ಅಶಕ್ತರಾಗಿದ್ದು ಸಾರ್ವಜನಿಕರು, ಸಾರ್ವಜನಿಕ ದತ್ತಿಗಳು ಸಹಾಯ ಮಾಡಲು ವಿನಂತಿಸಿದ್ದಾರೆ.

ಮೂರೂವರೆ ವರ್ಷಗಳ ಹಿಂದೆ ಕಿಡ್ನಿ ವೈಫಲ್ಯಕ್ಕೊಳಗಾಗಿರುವ ಯೂಸುಫ್ ಡಯಲಿಸಿಸ್ ಮಾಡಿಸಿಕೊಳ್ಳುತ್ತಿದ್ದಾರೆ. ಇತ್ತೀಚಿಗೆ ಆರೋಗ್ಯ ಬಿಗಡಾಯಿಸಿರುವ ಕಾರಣ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದಾರೆ. ಪತ್ನಿ ಹಾಗೂ ಆರು ವರ್ಷದ ಮಗನನ್ನು ಹೊಂದಿರುವ ಯೂಸುಫ್‌ರ ಚಿಕಿತ್ಸೆಗೆ ಸುಮಾರು 7.70 ಲಕ್ಷ ರೂ. ಆಸ್ಪತ್ರೆ ಖರ್ಚು ಬೇಕಾಗುತ್ತದೆ ಎಂದು ಆಸ್ಪತ್ರೆ ಅಂದಾಜಿಸಿದೆ.

ಸರ್ಕಾರ ಇವರ ಚಿಕಿತ್ಸೆಗೆ 3.5 ಲಕ್ಷ ಹಣ ಮಂಜೂರಿ ಮಾಡಿದೆಯಾದರೂ ಯೂಸುಫ್ ಕುಟುಂಬ ಉಳಿದ ಮೊತ್ತವನ್ನು ಹೊಂದಿಸುವ ಸ್ಥಿತಿಯಲ್ಲಿಲ್ಲ. ಈ ಹಿನ್ನೆಲೆಯಲ್ಲಿ ಸಮಾಜದ ದಾನಿಗಳು ಧನಸಹಾಯ ಒದಗಿಸಬೇಕು ಎಂದು ಮಣಿಪಾಲ್ ಆಸ್ಪತ್ರೆಯ ನೋಂದಣಿ ಸಂಖ್ಯೆ 2075907 ಮೂಲಕ ದಾಖಲಾಗಿರುವ ಯೂಸುಫ್ ವಿನಂತಿಸಿದ್ದಾರೆ.

ಅವರ ಬ್ಯಾಂಕ್ ಖಾತೆ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಕಂಬಳಿಕೊಪ್ಪ ಶಾಖೆಯಲ್ಲಿದ್ದು, ಅಕೌಂಟ್ ನಂಬರ್ 64174356338, ಐಎಫ್‌ಎಸ್‌ಸಿ ಕೋಡ್ ಎಸ್‌ಬಿಎಂವೈ0041164, ಈ ಖಾತೆಗೆ ಹಣ ಸಹಾಯವನ್ನು ಕಳುಹಿಸಿಕೊಡಲು ಯೂಸುಫ್ ಕೋರಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News