ಮೆಡಿಕಲ್ ಕಾಲೇಜ್ ನಿರ್ಮಾಣಕ್ಕೆ ಬಜೆಟ್ನಲ್ಲಿ ಹಣ ತೆಗೆದಿರಿಸಿಲ್ಲ: ಸಿ.ಟಿ.ರವಿ ಆರೋಪ
ಚಿಕ್ಕಮಗಳೂರು, ಮಾ.30: ರಾಜ್ಯದಲ್ಲಿ 6 ಮೆಡಿಕಲ್ ಕಾಲೇಜ್ಬಗ್ಗೆ ಪ್ರಸ್ತಾಪಿಸಿದ್ದು ಅದರಲ್ಲಿ ಚಿಕ್ಕಮಗಳೂರು ಸೇರಿದೆ. ಆದರೆ ಬಜೆಟ್ನಲ್ಲಿ ಹಣ ಮೀಸಲಿರಿಸಿಲ್ಲ. ಅದಕ್ಕ ಹಣ ತೆಗೆದಿರಿಸದಿರುವುದರಿಂದ ಅವು ಅನುಷ್ಟಾನಗೊಳ್ಳುವುದು ಅನುಮಾನ ಎಂದು ಶಾಸಕ ಸಿ.ಟಿ.ರವಿ ತಿಳಿಸಿದ್ದಾರೆ.
ಅವರು ಗುರುವಾರ ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಕಳೆದ 2012-13ರ ಸಾಲಿನ ಬಜೆಟ್ನಲ್ಲಿ ಮಂಜೂರಾದ ಚಿಕ್ಕಮ ಗಳೂರು ಮೆಡಿಕಲ್ ಕಾಲೇಜನ್ನು ಈ ಬಾರಿಯ ಬಜೆಟ್ನಲ್ಲಿ ಉಲ್ಲೇಖಿಸಲಾಗಿದೆ. ಆದರೆ ಅದಕ್ಕೆ ಅನುದಾನ ಮೀಸಲಿರಿಸಿಲ್ಲ. ಇಲಾಖೆಗೆ ನೀಡಿದ 2004 ಕೋಟಿ ಹಣದಲ್ಲಿ ಈ ಕಾಲೇಜ್ ಸ್ಥಾಪನೆಯ ಹಣವೂ ಸೇರಿದೆ ಎಂದು ಕಾಂಗ್ರೆಸಿಗರು ಸ್ಪಷ್ಟನೆ ನೀಡಿದ್ದಾರೆ. ಆದರೆ ಇತರೆ ಎಲ್ಲಾ ಬಾಬ್ತುಗಳಿಗೆ ಇಂತಿಷ್ಟು ಹಣವೆಂದು ಬಜೆಟ್ನಲ್ಲಿ ನಿಗದಿಗೊಳಿಸಲಾಗಿದ್ದು ಹೊಸಯೋ ಜನೆಗೆ ಮೊತ್ತ ನಿಗದಿಗೊಳಿಸಿರುವ ಪ್ರಸ್ತಾಪವಿಲ್ಲ ಎಂದು ವಿವರಿಸಿದರು.
ಹಿಂದಿನ ಯಾವುದೇ ಬಜೆಟ್ನಲ್ಲಿ ಪ್ರಸ್ತಾಪವಾಗದ ಕಾಮಗಾರಿಯೊಂದನ್ನು ಈ ಬಾರಿಯ ಬಜೆಟ್ನ ಹಿನ್ನೋಟದಲ್ಲಿ ಪ್ರಸ್ತಾಪಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ಬೆಳವಾಡಿ ಕೆರೆಗೆ ನೀರು ಒದಗಿಸುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು ಅದನ್ನು 2016-17ನೇ ಸಾಲಿನಲ್ಲಿ ಪೂರ್ಣಗೊಳಿಸ ಗುವುದು ಎಂದು ಮುಖ್ಯಮಂತ್ರಿಗಳು ಪ್ರಕಟಿಸಿದ್ದಾರೆ ಎಂದರು.
2016-17ನೇ ಆರ್ಥಿಕ ವರ್ಷ ಪೂರ್ಣಗೊಳದಳುವುದು ಮಾ.31 ರಂದು. ಆಂದರೆ ನಾಳೆ ಈ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗೆ ಸಿದ್ದವಾಗಬೇಕಾಗಿತ್ತು. ಇಲ್ಲೂ ಕೂಡ ಸುಳ್ಳು ಮಾಹಿತಿ ಕೊಡುವುದನ್ನು ಕಾಂಗ್ರೆಸಿಗರು ಮಾಡಿದ್ದಾರೆ. ಹಿಂದಿನ ಯಾವುದೇ ಬಜೆಟ್ನ ಮುನ್ನೋಟದಲ್ಲಿ ಈ ಕಾಮಗಾರಿಯನ್ನು ಪ್ರಸ್ತಾಪಿಸದೆ ಈ ಬಾರಿಯ ಬಜೆಟ್ನ ಹಿನ್ನೋಟದಲ್ಲಿ ಮಾತ್ರ ಉಲ್ಲೇಖಿಸಿರುವುದು ಜನರನ್ನು ದಿಕ್ಕು ತಪ್ಪಿಸಲು ಎಂಬುವುದು ಸ್ಪಷ್ಟ. ಇದು ಇಲಾಖೆ ಕಾಮಗಾರಿಯಾಗಿ ನಬಾರ್ಡ್ ನೆರವಿನಿಂದ ಆರಂಭವಾದ ಕಾಮಗಾರಿ. ಅದನ್ನು ಬಜೆಟ್ನಲ್ಲಿ ರಾಜಕೀಯ ಕಾರಣಕ್ಕಾಗಿ ಪ್ರಸ್ತಾಪಿಸಲಾಗಿದೆ ಎಂದು ನುಡಿದರು.
ಮುನ್ನೋಟದಲ್ಲಿ ಕೆರೆ ಸಂಜೀವಿನಿ ಸೇರಿದಂತೆ ಕರಾವಳಿ ಅಣೆಕಟ್ಟು, ಅಂತರ್ಜಲ ಕುಸಿದ ಜಿಲ್ಲೆಗಳಾಗಿ ಹಣ ಮೀಸಲು ಗೊಳಿಸಲಾಗಿದ್ದು ಬೆಳವಾಡಿ ಕೆರೆಗೆ ನೀರು ಹರಿಸಲು ಯಾವುದೇ ಮೊತ್ತ ನಿಗದಿಗೊಳಿಸಿಲ್ಲ ಎಂದ ಅವರು ಹೀಗೆ ಈ ಜಿಲ್ಲೆಗೆ ಆಯುಷ್ ಆಸ್ಪತ್ರೆಹೊರತುಪಡಿಸಿ ಬೇರೆ ಯಾವುದೇ ಕೊಡುಗೆ ನೀಡಿಲ್ಲ. ಅನುದಾನ ನಿಗದಿಯಾಗಿಲ್ಲ ಎಂದ ಅವರು, ಸಖರಾಯಪಟ್ಟಣ, ಕಡೂರು ಎರಡೂ ಆಸ್ಪತ್ರೆ ಮೇಲ್ದರ್ಜೆಗೆ ಏರಿ ಸಲು ಮನವಿ ಮಾಡಲಾಗಿತ್ತು. ಆರೆ ಅದು ಸಾಧ್ಯವಿಲ್ಲ ಎಂದು ನಿರಾಕರಿಸಲಾಗಿದೆ. ಆದರೆ ಅದನ್ನು ಪುನರ್ ಪರಿಶೀಲನೆ ಮಾಡಬೇಕೆಂದು ಒತ್ತಾಯ ಪಡಿಸುವುದಾಗಿ ತಿಳಿಸಿದರು.
ಗೋಷ್ಟಿಯಲ್ಲಿ ಕೋಟೆ ರಂಗನಾಥ್, ಹೆಚ್.ಡಿ.ತಮ್ಮಯ್ಯ, ವರಸಿದ್ಧಿ ವೆೀಣು ಗೋಪಾಲ್, ಉಪ್ಪಳ್ಳಿ ಅನ್ವರ್ ಉಪಸ್ಥಿರಿದ್ದರು.