×
Ad

ಸಾಲಬಾಧೆ: ರೈತ ಆತ್ಮಹತ್ಯೆ

Update: 2017-03-31 16:03 IST

ಕೊರಟಗೆರೆ, ಮಾ.31: ಸಾಲಬಾಧೆಗೆ ಹೆದರಿ ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಹೊಳವನಹಳ್ಳಿ ಹೋಬಳಿಯ ಶಕುನಿ ತಿಮ್ಮನಹಳ್ಳಿ ಲಂಬಾಣಿ ತಾಂಡ ಎಂಬಲ್ಲಿ ಇಂದು ನಡೆದಿದೆ.

ರಾಮಾ ನಾಯ್ಕ ಎಂಬವರ ಪುತ್ರ ಬೀಮಾನಾಯ್ಕ(65) ಮಾಡಿಕೊಂಡವರು. ಇವರು ಕೃಷಿ ಚಟುವಟಿಕೆಗಾಗಿ ಬ್ಯಾಂಕ್ ಮತ್ತು ಕೈ ಸಾಲ ಮಾಡಿದ್ದರು. ಆದರೆ ತೀವ್ರ ಬರಗಾಲ ಕಾರಣ ಕೊಳವೆಬಾವಿ ಬತ್ತಿತ್ತು. ನೀರಿಲ್ಲದೆ ಕೃಷಿ ನಷ್ಟವಾಗಿತ್ತು. ಇದರಿಂದ ಸಾಲ ತೀರಿಸುವ ಬಗ್ಗೆ ಹೆದರಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರೆನ್ನಲಾಗಿದೆ. ಈ ಬಗ್ಗೆ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News