ಓ.. ಮೆಣಸೇ..

Update: 2017-04-02 18:54 GMT

ಮುಂದಿನ ಎರಡು ವರ್ಷಗಳಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಗೂ ಆಡಳಿತದಲ್ಲಿ ಸುಧಾರಣೆ ಸ್ಪಷ್ಟವಾಗಿ ಕಾಣಿಸಲಿದೆ

-ಸುರೇಶ್ ಪ್ರಭು, ಕೆಂದ್ರ ಸಚಿವ

ಬಹುಶಃ ಎಲ್ಲರಿಗೂ ಉಚಿತ ಭೂತಕನ್ನಡಿ ವಿತರಿಸುವ ಯೋಜನೆಯಿರಬೇಕು.

---------------------

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರ ಸ್ವಾಮಿ ಅವರಲ್ಲಿ ಎಲ್ಲ ವಿಷಯಗಳಲ್ಲೂ ಕೇವಲ ಹಿಟ್ ಆ್ಯಂಡ್ ರನ್ ವರ್ತನೆ

- ಜಗದೀಶ್ ಶೆಟ್ಟರ್, ವಿ.ವಿ.ನಾಯಕ

ಅದು ರಾಗಿ ಹಿಟ್ ತಿಂದ ಪರಿಣಾಮ.

---------------------
  ನಾನು ಶಿಸ್ತು ಕಲಿತದ್ದು ಆರೆಸ್ಸೆಸ್‌ನಿಂದ

-ಎಲ್.ಕೆ.ಅಡ್ವಾಣಿ, ಬಿಜೆಪಿ ನಾಯಕ

ಮೋದಿ ಆರೆಸ್ಸೆಸ್‌ಗೆ ಕೃತಜ್ಞರಾಗಿದ್ದಾರಂತೆ.

---------------------

  ಮುಲಾಯಂ ಸಿಂಗ್, ಮಾಯಾವತಿ ಮತ್ತು ಎಲ್ಲ ಜಾತ್ಯತೀತ ಪಕ್ಷಗಳು ಒಂದಾದರೆ ಬಿಜೆಪಿ ಕಥೆ ಮುಗಿದಂತೆಯೇ

  - ಲಾಲು ಪ್ರಸಾದ್ ಯಾದವ್, ಆರ್‌ಜೆಡಿ ನಾಯಕ

ಬರೇ ಕಥೆ ಕಟ್ಟುವುದೇ ಆಯಿತು.

---------------------

ಸಂವಿಧಾನವನ್ನು ಸಂರಕ್ಷಿಸುವ ನಾಯಕತ್ವ ನಮ್ಮಲ್ಲಿ ಬೆಳೆದು ಬರಬೇಕು
   - ಆಸ್ಕರ್ ಫೆರ್ನಾಂಡಿಸ್ ರಾಜ್ಯ ಸಭಾ ಸದಸ್ಯ

ಬೆಳೆಯಲು ನೀವು ಬಿಡಬೇಕಲ್ಲ?
---------------------

ರಾಹುಲ್‌ರನ್ನು ಸೈಡ್‌ಲೈನ್ ಮಾಡಲಾಗುತ್ತಿದೆ ಎಂಬುದು ಸುಳ್ಳು

  -ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ

ಕಾಂಗ್ರೆಸ್‌ನ್ನು ಸೈಡ್‌ಲೈನ್ ಮಾಡುತ್ತಿರುವುದರ ಬಗ್ಗೆ ಏನು ಹೇಳುತ್ತೀರಿ?

ಯುವ ಮನಸ್ಸುಗಳನ್ನು ಇತರ ಆಕರ್ಷಣೆಗಳಿಂದ ಬೇರ್ಪಡಿಸಿ ಧಾರ್ಮಿಕ ಆಚರಣೆ ಬೆಳೆಸುವ ಕೆಲಸ ಆಗಬೇಕು

  -ವಿಶ್ವೇಶ ತೀರ್ಥ ಸ್ವಾಮೀಜಿ, ಪೇಜಾವರ ಮಠ

ರಾಘವೇಶ್ವರ ಸ್ವಾಮೀಜಿಗಳದ್ದು ಯುವಮನಸ್ಸು ಅಲ್ಲ ಅಂತೀರಾ?
---------------------

ನಾನು ಹಣಮಾಡುವ ಆಸೆಯಿಂದ ರಾಜಕೀಯಕ್ಕೆ ಬಂದಿಲ್ಲ

  - ಪ್ರಮೋದ್ ಮಧ್ವರಾಜ್, ಸಚಿವ

ಈ ಹೇಳಿಕೆಯ ಹಿಂದೆ ಅದೇನು ದುರಾಸೆಯಿದೆಯೋ?
---------------------
  ಹಿಂದೂ-ಮುಸ್ಲಿಂ ಜೊತೆ ಸೇರಿ ರಾಮ ಮಂದಿರ ಕಟ್ಟೋಣ

-ಗಿರಿರಾಜ್ ಸಿಂಗ್, ಕೇಂದ್ರ ಸಚಿವ

ಜೊತೆ ಸೇರಿ ಮನಸ್ಸು ಕಟ್ಟುವ ಕೆಲಸವಾಗಲಿ ಮೊದಲು.

---------------------
  
ಅಕ್ರಮ ಕಸಾಯಿಖಾನೆ ಮುಚ್ಚುವ ಉ.ಪ.ಸರಕಾರದ ನಿರ್ಧಾರಕ್ಕೆ ಕೋಮು ಬಣ್ಣ ಸರಿಯಲ್ಲ

- ವೆಂಕಯ್ಯ ನಾಯ್ಡು, ಕೇಂದ್ರ ಸಚಿವ
  ಚುನಾವಣೆಯೇ ಅಕ್ರಮವೆಂಬ ಆರೋಪವಿರುವಾಗ, ಕಸಾಯಿಖಾನೆಯ ಅಕ್ರಮದ ಕುರಿತು ಮಾತನಾಡುವುದೇನಿದೆ?
---------------------
  ನಾನು ಕೆಲಸದ ಹುಳ

-ಯೋಗಿ ಆದಿತ್ಯನಾಥ, ಉ.ಪ.ಮುಖ್ಯಮಂತ್ರಿ

ಹುಳ ಎನ್ನುವುದರಲ್ಲಿ ಎರಡು ಮಾತಿಲ್ಲ.

---------------------

ಆರೆಸ್ಸೆಸ್ ಸ್ವಯಂ ಸೇವಕರು ಅಂತರ್ಜಾತಿ ವಿವಾಹದ ಪರವಾಗಿ ನಿಲ್ಲಬೇಕು

- ಮೋಹನ್ ಭಾಗವತ್, ಆರೆಸ್ಸೆಸ್ ಮುಖ್ಯಸ್ಥ ಮೊದಲು ಅವರು ವಿವಾಹವಾಗಲಿ.

---------------------
    ಬೆನ್ನಿಗೆ ಇರಿಯುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮ

- ಶ್ರೀನಿವಾಸ ಪ್ರಸಾದ್, ಮಾಜಿ ಸಚಿವ

ದಲಿತರ ಬೆನ್ನಿಗೆ ಇರಿವ ಹಕ್ಕು ಇರುವುದು ನಿಮಗಷ್ಟೇ ಎನ್ನುವುದು ಅವರಿಗೇನು ಗೊತ್ತು?

  ನಾನಿನ್ನೂ ಗರ್ಭಿಣಿ ಆಗಿಲ್ಲ

- ಬಿಪಾಶಾ ಬಸು, ಬಾಲಿವುಡ್ ನಟಿ
  
ಮದುವೆಯಾಗಿದ್ದೀರಾ ಎನ್ನುವುದನ್ನು ಮೊದಲು ಸ್ಪಷ್ಟಪಡಿಸಿ.

---------------------

ವೀರಪ್ಪನ್‌ನಂತಹ ಪಾತಕಿಗಳು ಹುಟ್ಟಿದರೆ ಮಟ್ಟಹಾಕಲು ಅಗತ್ಯವಾದ ತರಬೇತಿ ನಮ್ಮ ವ್ಯವಸ್ಥೆಯಲ್ಲಿಲ್ಲ

- ಡಾ.ಜಿ.ಪರಮೇಶ್ವರ್, ಸಚಿವ

ಮಟ್ಟ ಹಾಕಬಾರದು ಎನ್ನುವ ಕಾರಣಕ್ಕಾಗಿ ತರಬೇತಿ ನೀಡುತ್ತಿಲ್ಲ ಎಂಬ ಆರೋಪಗಳಿವೆ.

  ಯುಪಿಎ ಅಧಿಕಾರದ ಅವಧಿಯಲ್ಲಿ ಜಿಎಸ್‌ಟಿಗೆ ಭಾರೀ ವಿರೋಧ ವ್ಯಕ್ತಪಡಿಸಿದ ಕಾರಣ ಅದನ್ನು ಅನುಷ್ಠಾನ ಮಾಡಲು ಸಾಧ್ಯವಾಗಲಿಲ್ಲ
-ಎಂ.ವೀರಪ್ಪ ಮೊಯ್ಲಿ, ಸಂಸದ
  ಹಾಗಾದರೆ ಅದನ್ನು ಸಾಧಿಸಿದ ಎನ್‌ಡಿಎ ಸರಕಾರವನ್ನು ಅಭಿನಂದಿಸುತ್ತಿದ್ದೀರಿ ಎಂದಾಯಿತು.
---------------------
  ಆರೆಸ್ಸೆಸ್ ನಾಯಕ ಮೋಹನ್ ಭಾಗವತ್ ರಾಷ್ಟ್ರಪತಿಯಾಗಲಿ.
- ಜಾಫರ್ ಶರೀಫ್, ಮಾಜಿ ಸಚಿವ
ತಮ್ಮ ಕೈಯಲ್ಲಿರುವ ಊರುಗೋಲನ್ನು ಆರೆಸ್ಸೆಸ್ ಬೈಠಕ್ ಕವಾಯತಿಗೆ ಬಳಸಿಕೊಳ್ಳಬಹುದು.

---------------------
  ಗೆದ್ದರೆ ಒಳ್ಳೆಯ ಬೀಫ್ ಸಿಗುವಂತೆ ಮಾಡುತ್ತೇನೆ
-ಎನ್.ಶ್ರೀಪ್ರಕಾಶ್, ಮಲಪ್ಪುರಂ ಬಿಜೆಪಿ ಅಭ್ಯರ್ಥಿ
  ಸೋತರೆ ಬೀಫ್ ನಿಷೇಧ ಚಳವಳಿ ಆರಂಭಿಸುತ್ತೇನೆ ಎಂದರೆ ನೀವು ಗೆಲ್ಲುವುದು ಖಂಡಿತ.
---------------------
  ಗುಜರಾತ್‌ನ್ನು ಸಸ್ಯಾಹಾರಿ ರಾಜ್ಯವನ್ನಾಗಿ ಮಾಡುವುದು ನಮ್ಮ ಗುರಿ

 -ವಿಜಯ್ ರುಪಾನಿ, ಮುಖ್ಯಮಂತ್ರಿ

ನರಭಕ್ಷಕ ರಾಜ್ಯವೆನ್ನುವ ಕಳಂಕದಿಂದ ಯಾವಾಗ ಪಾರು ಮಾಡುತ್ತೀರಿ?
---------------------

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...