ಯಾರು ಸಾಲ ಕೊಟ್ಟಿದ್ದಾರೋ ಅವರೇ ಮನ್ನಾ ಮಾಡಲಿ : ಸಿಎಂ ಸಿದ್ದರಾಮಯ್ಯ

Update: 2017-04-06 07:03 GMT

ಮೈಸೂರು,ಎ.6:"ರೈತರ ಸಾಲ ಮನ್ನಾ ನಾವ್ಯಾಕೆ ಮಾಡಬೇಕು. ಸಾಲ  ಕೊಟ್ಟಿರೋರು ಯಾರು ಹೇಳಿ ?  ಅವರು ಕೊಟ್ಟಿರುವ ಸಾಲ ಅವರೇ ಮನ್ನಾ ಮಾಡಲಿ" ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಉಪಚುನಾವಣೆಯ ಪ್ರಚಾರದಲ್ಲಿ ನಿರತರಾಗಿರುವ ಸಿದ್ದರಾಮಯ್ಯ ಅವರನ್ನು  ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ " ಸಾಲ ಮನ್ನಾ ಅವರ(ಕೇಂದ್ರ ಸರಕಾರ)  ಜವಾಬ್ದಾರಿ” ಎಂದು  ಹೇಳಿದ್ದಾರೆ.
 "ರಾಷ್ಟ್ರೀಕೃತ ಬ್ಯಾಂಕ್‌ ಸಾಲ ನಾವು ಮನ್ನಾ ಮಾಡಿದ್ರೆ. ನಮ್ಮ ಬ್ಯಾಂಕ್ ಕೊಟ್ಟಿರುವ ಸಾಲ ಮನ್ನಾ ಮಾಡುವರ‍್ಯಾರು"   ರೈತರ ಸಾಲ ಮನ್ನಾ ಬೇಡಿಕೆಗೆ ಸಿದ್ದರಾಮಯ್ಯ  ಸುದ್ದಿಗಾರರನ್ನೇ ಪ್ರಶ್ನಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News