ಸಿಗರೇಟ್‌ ನೀಡದಕ್ಕೆ ಸ್ನೇಹಿತನ ಕೊಲೆ

Update: 2017-04-09 06:09 GMT

ಬೆಂಗಳೂರು,ಎ.9:ಸಿಗರೇಟ್‌ ತಾರದಕ್ಕೆ ಸ್ನೇಹಿತನನ್ನು ಚಾಕುವಿನಿಂದ  ಇರಿದು ಕೊಲೆಗೈದ  ಘಟನೆ ಬಾಗಲೂರು ಲೇಔಟ್ ನಲ್ಲಿ ನಡೆದಿದೆ.
ಆಟೋ ಚಾಲಕ ಮುಹಮ್ಮದ್ ಅಲಿ(30) ಸ್ನೇಹಿತರಿಂದ ಇರಿತಕ್ಕೆ ಬಲಿಯಾಗಿದ್ದಾರೆ.

ಶನಿವಾರ ರಾತ್ರಿ ಪಾರ್ಟಿಯ ವೇಳೆ ಮುಹಮ್ಮದ್‌ಗೆ ಸ್ನೇಹಿತರಾದ ವಾಹಿದ್‌, ಮುಜಾಮಿಲ್‌ ಮತ್ತು ಸಬಾರಕ್ ಸಿಗರೇಟ್‌ ತರಲು ಮುಹಮ್ಮದ್‌ಗೆ ಸೂಚಿಸಿದರೆನ್ನಲಾಗಿದೆ. ಆದರೆ ಆತ ನಿರಾಕರಿಸಿದಾಗ ಕೋಪಗೊಂಡ ವಾಹಿದ್‌, ಮುಜಾಮಿಲ್‌ ಮತ್ತು ಸಬಾರಕ್  ಎಂಬವರು ಮುಹಮ್ಮದ್ ಅಲಿಗೆ ಚಾಕುವಿನಿಂದ ಇರಿದು ಪರಾರಿಯಾದರೆನ್ನಲಾಗಿದೆ.
 ಬಾಗಲೂರು ಲೇಔಟ್ ನ ಆಟೋ ಸ್ಟ್ಯಾಂಡ್ ಬಳಿ ಮುಹಮ್ಮದ್ ಅಲಿ ಸಹಾಯಕ್ಕಾಗಿ ಕೂಗುತ್ತಿದ್ದಾಗ ಪೊಲೀಸರು ಧಾವಿಸಿ ಬಂದು ಆತನನ್ನು ಸ್ಥಳೀಯ ಆಸ್ಪತ್ರಗೆ ದಾಖಲಿಸಿದರೆನ್ನಾಗಿದೆ.

ಗಂಭೀರ ಗಾಯಗೊಂಡಿದ್ದ ಮುಹಮ್ಮದ್‌ ಅಲಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಮೃತಪಟ್ಟರು ಎಂದು ತಿಳಿದು ಬಂದಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News