ನೂತನ ಶಾಸಕರಾದ ಕೇಶವ ಮೂರ್ತಿ, ಗೀತಾ ಪ್ರಮಾಣ

Update: 2017-04-21 06:44 GMT

ಬೆಂಗಳೂರು, 21: ಉಪ ಚುನಾವಣೆಯಲ್ಲಿ ಜಯ ಗಳಿಸಿದ ಕಳಲೆ ಕೇಶವ ಮೂರ್ತಿ ಮತ್ತು ಗೀತಾ ಮಹದೇವ್ ಪ್ರಸಾದ್ ಇಂದು ಪ್ರಮಾಣ ವಚನ ಸ್ವೀಕರಿಸಿದರು.

ಕೇಶವಮೂರ್ತಿ ಶ್ರೀಕಂಠೇಶ್ವರನ ಹೆಸರಲ್ಲಿ ಮತ್ತು ಗೀತಾ ಮಹದೇವ ಪ್ರಸಾದ್ ಅವರು ಮಲೈಮಹದೇಶ್ವರನ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ವಿಧಾನಸೌಧದ ಬಾಂಕ್ವೆಟ್ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ಸ್ವೀಕರ್ ಕೆ.ಬಿ.ಕೋಳಿವಾಡ್ ಪ್ರಮಾಣ ವಚನ ಬೋಧಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ನಂಜನಗೂಡು ಕ್ಷೇತ್ರದ ಶಾಸಕರಾಗಿ ಕಳಲೆ ಕೇಶವಮೂರ್ತಿ ಹಾಗೂ ಗುಂಡ್ಲುಪೇಟೆ ಕ್ಷೇತ್ರದ ಶಾಸಕಿಯಾಗಿ ಗೀತಾ ಮಹದೇವ ಪ್ರಸಾದ್ ಮೊದಲ ಬಾರಿ ವಿಧಾನಸಭೆ ಪ್ರವೇಶಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News