ಕೆಂಪು ದೀಪ ನಿರ್ಬಂಧ ಮೋದಿ ಗಿಮಿಕ್ : ಹೆಚ್ಡಿಕೆ ಟೀಕೆ
Update: 2017-04-21 14:09 GMT
ಮಡಿಕೇರಿ,ಎ.21 : ಗಣ್ಯ ವ್ಯಕ್ತಿಗಳ ಕಾರ್ನಲ್ಲಿ ಅಳವಡಿಸುವ ಕೆಂಪು ದೀಪಕ್ಕೆ ನಿರ್ಬಂಧ ಹೇರಿರುವ ಕ್ರಮ ಕೇವಲ ಪ್ರಧಾನಿ ಮೋದಿ ಅವರ ಗಿಮಿಕ್ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಟೀಕಿಸಿದ್ದಾರೆ.
ಕೆಂಪು ದೀಪ ಅಳವಡಿಕೆಗೆ ನಿರ್ಬಂಧವನ್ನು ಸ್ವಾಗತಿಸುತ್ತೇನೆ. ಆದರೆ, ಜನಸಾಮಾನ್ಯರ ಸಂಕಷ್ಟಗಳಿಗೆ ಅಗತ್ಯ ಪರಿಹಾರ ಒದಗಸಿ, ಕನಿಷ್ಠ ಸೌಲಭ್ಯ ಒದಗಿಸಬೇಕಾದ ಕಾರ್ಯಕ್ರಮಗಳಿಗೆ ಬದಲಾಗಿ ವಿಐಪಿ ಕಾರುಗಳಿಗೆ ಕೆಂಪು ದೀಪ ಅಳವಡಿಕೆಗೆ ನಿರ್ಬಂಧ ಒಂದು ಗಿಮಿಕ್ ಅಷ್ಟೆ ಎಂದರು.
ವಿದೇಶಗಳ ಸಚಿವರು, ಅತೀ ಗಣ್ಯ ವ್ಯಕ್ತಿಗಳು ಸರ್ಕಾರಿ ವಾಹನಗಳನ್ನೇ ಬಳಸುವುದಿಲ್ಲ. ಇದೇ ಪದ್ಧತಿಯನ್ನು ಇಲ್ಲಿಯೂ ಜಾರಿಗೆ ತರಲು ಪ್ರಯತ್ನಿಸಲಿ ಎಂದು ಕುಮಾರಸ್ವಾಮಿ ತಿಳಿಸಿದರು.