ಶಾರ್ಟ್ ಸರ್ಕ್ಯೂಟ್ ನಿಂದ ಸುಟ್ಟು ಭಸ್ಮವಾದ ಲಾರಿ

Update: 2017-04-24 13:25 GMT

ಮಂಡ್ಯ, ಎ.24: ಕಬ್ಬಿನ ತರಗು ಮತ್ತು ಒಣಸಿಪ್ಪೆಯನ್ನು ತುಂಬಿಕೊಂಡು ಹೋಗುತ್ತಿದ್ದ ಲಾರಿ ವಿದ್ಯುತ್ ಶಾರ್ಟ್‌ಸಕ್ಯೂಟ್‌ನಿಂದಾಗಿ ಸಂಪೂರ್ಣವಾಗಿ ಭಸ್ಮವಾಗಿರುವ ಘಟನೆ ಪಾಂಡವಪುರ ತಾಲೂಕು ಚಿಕ್ಕಬ್ಯಾಡರಹಳ್ಳಿ ಬಳಿ ಸೋಮವಾರ ಬೆಳಗ್ಗೆ ನಡೆದಿದೆ.

ಚಿಕ್ಕಬ್ಯಾರಹಳ್ಳಿ ಗ್ರಾಮದ ತಮ್ಮೇಗೌಡ ಎಂಬವರಿಗೆ ಸೇರಿದ ಲಾರಿ ಚಿಕ್ಕಮರಳಿ ಗೇಟ್ ಸಮೀಪದ ಸಿಡಿಎಸ್ ನಾಲೆಯ ಪಕ್ಕದಲ್ಲಿರುವ ಆಲೆಮನೆಯಿಂದ ಕಬ್ಬಿನ ಒಣಸಿಪ್ಪೆ ಹಾಗೂ ತರಗನ್ನು ತುಂಬಿಕೊಂಡು ಚಿಕ್ಕಬ್ಯಾಡರಹಳ್ಳಿಗೆ ಬರುವಾಗ ಈ ಘಟನೆ ಸಂಭವಿಸಿದೆ.

ರಸ್ತೆಪಕ್ಕದ ಟ್ರಾನ್ಸ್‌ಫಾರ್ಮರ್‌ನಿಂದ ಉಂಟಾದ ವಿದ್ಯುತ್ ಶಾರ್ಟ್‌ಸರ್ಕ್ಯೂಟ್‌ನಿಂದ ಲಾರಿಯಲ್ಲಿದ್ದ ತರಗು, ಒಣಸಿಪ್ಪೆ ಹೊತ್ತಿಕೊಂಡಿದೆ. ತಕ್ಷಣ ಚಾಲಕ ಲಾರಿಯಿಂದ ಇಳಿದಿದ್ದಾನೆ. ಗ್ರಾಮಸ್ಥರು ಬೆಂಕಿನಂದಿಸುವ ಯತ್ನ ನಡೆಸಿದ್ದಾರೆ. ಅಗ್ನಿಶಾಮಕದಳದವರು ಆಗಮಿಸುವ ಹೊತ್ತಿಗಾಗಲೇ ಲಾರಿ ಸಂಪೂರ್ಣವಾಗಿ ಭಸ್ಮವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News