‘ಯಡಿಯೂರಪ್ಪ ಸಿಎಂ ಆಗುವುದನ್ನು ತಪ್ಪಿಸಲು ಅತೃಪ್ತ ಆತ್ಮಗಳ ಯತ್ನ’

Update: 2017-04-28 07:18 GMT

ಶಿವಮೊಗ್ಗ, ಎ.28: ಬಿಎಸ್ ಯಡಿಯೂರಪ್ಪರನ್ನು ಸಿಎಂ ಆಗುವುದನ್ನು ತಪ್ಪಿಸಲು ಕೆಲವು ಅತೃಪ್ತ ಆತ್ಮಗಳು ಪ್ರಯತ್ನಿಸುತ್ತಿದ್ದು, ಗುರುವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಅತೃಪ್ತರ ಸಮಾವೇಶ ಇಂತದ್ದೊಂದು ಪ್ರಯತ್ನವಾಗಿದೆ ಎಂದು ಜಿಲ್ಲೆಯ ಬಿಜೆಪಿ ಮುಖಂಡರಾದ ಆಯನೂರು ಮಂಜುನಾಥ್ ಹಾಗೂ ಎಸ್.ರುದ್ರೇಗೌಡ ಅವರು ಜಂಟಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

‘‘ಈಶ್ವರಪ್ಪ ಶಿವಮೊಗ್ಗದಲ್ಲಿ ಬಿಜೆಪಿಯನ್ನು ಇಬ್ಬಾಗ ಮಾಡಿದ್ದಾರೆ.  ಈಶ್ವರಪ್ಪರ ಮೈಕ್ರೋ ಫೈನಾನ್ಸ್ ವರ್ಷಕ್ಕೆ ಮೂರು ಬಾರಿ ಲಾಭ ಗಳಿಸುತ್ತಿದೆ. ಈಶ್ವರಪ್ಪರನ್ನು ರಾಜ್ಯದ ಹಣಕಾಸು ಮಂತ್ರಿ ಮಾಡಬೇಕು.’’ ಎಂದು ಮಂಜುನಾಥ್ ವ್ಯಂಗ್ಯವಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News