ಮುಖ್ಯಮಂತ್ರಿ ಬೆಂಗಳೂರಿಗೆ ನಿರ್ಗಮನ

Update: 2017-04-30 11:49 GMT

ಬೆಂಗಳೂರು,ಎ.30: ನಾಲ್ಕು ದಿನದ ಯುಎಇ ಪ್ರವಾಸ ಮುಗಿಸಿ ಬೆಂಗಳೂರಿಗೆ ನಿರ್ಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದುಬೈಯಲ್ಲಿ ಅಲ್ ಫಲಾಹ್ ಗ್ರೂಪ್ ವತಿಯಿಂದ ಭಾನುವಾರ ಮಧ್ಯಾಹ್ನ ಆತ್ಮೀಯವಾಗಿ ಬೀಳ್ಕೊಡಲಾಯಿತು. ದುಬೈ ಹಾಗೂ ಅಬುದಾಬಿಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಏಪ್ರಿಲ್ 27ರಂದು ದುಬೈ ತೆರಳಿದ್ದ ಸಿದ್ದರಾಮಯ್ಯ ಭಾನುವಾರ ದುಬೈಯಿಂದ ಮಧ್ಯಾಹ್ನ 1.45ರ ಎಮಿರೇಟ್ಸ್ ವಿಮಾನ ಹತ್ತಿದ್ದಾರೆ. ಸಂಜೆ 7.15ಕ್ಕೆ ಅವರು ಬೆಂಗಳೂರು ವಿಮಾನ ನಿಲ್ದಾಣ ತಲುಪಲಿದ್ದಾರೆ.

ಬೀಳ್ಕೊಡುಗೆ ಸಂದರ್ಭ ಕರ್ನಾಟಕ ಎನ್ನಾರೈ ಡೆಪ್ಯುಟಿ ಚೇರ್ಮೆನ್ ಡಾ.ಆರ್ತಿಕೃಷ್ಣ, ಮಂಗಳೂರು ಶಾಸಕ ಮೊಯ್ದಿನ್ ಬಾವಾ, ಎಂ.ಫ್ರೆಂಡ್ಸ್ ಕಾರ್ಯದರ್ಶಿ ರಶೀದ್ ವಿಟ್ಲ, ದುಬೈ ಬಿಸಿಎಫ್ ಅಧ್ಯಕ್ಷ ಡಾ.ಯೂಸುಫ್, ಆಸಿಫ್ ಅಲ್ ಫಲಾಹ್ ಈ ಸಂದರ್ಭ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News