ಅಕ್ರಮ ಮರಳು ಸಾಗಾಣೆ: ಲಾರಿ, ಎತ್ತಿನಗಾಡಿ ವಶ

Update: 2017-04-30 18:08 GMT

ಮಂಡ್ಯ, ಎ.30: ಅಕ್ರಮವಾಗಿ ಮರಳು ಸಾಗಾಣೆ ಮಾಡುತ್ತಿದ್ದ ಎರಡು ಲಾರಿ ಹಾಗೂ ಏಳು ಎತ್ತಿನಗಾಡಿಗಳನ್ನು ಪಾಂಡವಪುರ ರೈಲ್ವೆ ನಿಲ್ದಾಣ ಹಾಗೂ ಪಾಂಡವಪುರ ತಾಲೂಕಿನ ಸಣಬದ ಕೊಪ್ಪಲು ಬಳಿ ವಶಪಡಿಸಿಕೊಂಡಿದ್ದಾರೆ.

ಮಾಹಿತಿ ಬಂದ ಮೇರೆಗೆ ರವಿವಾರ ಮುಂಜಾನೆ ರೈಲ್ವೆ ನಿಲ್ದಾಣದ ಬಳಿಗೆ ತೆರಳಿದ ಪೊಲೀಸರು ಅಕ್ರಮವಾಗಿ ಮರಳು ಸಾಗಾಣೆ ಮಾಡುತ್ತಿದ್ದ ಎರಡು ಲಾರಿಗಳನ್ನು ವಶಕ್ಕೆ ಪಡೆದರು. ಲಾರಿ ಚಾಲಕರು ಪರಾರಿಯಾದರು.

ರವಿ ಮತ್ತು ಶಶಿ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ. ಮತ್ತೊಂದು ಪ್ರಕರಣದಲ್ಲಿ ತೊಣ್ಣೂರು ಕೆರೆಯ ಹಿನ್ನೀರಿನ ಸಣಬದಕೊಪ್ಪಲು ಬಳಿ ಏಳು ಮರಳು ತುಂಬಿದ್ದ ಏಳು ಲಾರಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ದಂಡ ವಸೂಲಿ ಮಾಡಿದ ನಂತರ ಬಿಟ್ಟುಕಳುಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News