ಮಹಿಳೆಯ ಕೊಲೆ ಪ್ರಕರಣ ಭೇದಿಸಿದ ಪೊಲೀಸರು: ಪತಿ, ಸಂಬಂಧಿಕನ ಬಂಧನ

Update: 2017-05-03 17:02 GMT

ಮುಂಡಗೋಡ, ಮೇ 3: ಮಹಿಳೆಯನ್ನು ಭೀಕರವಾಗಿ ಕೊಲೆ ಮಾಡಿ ಶಿಂಗ್ನಳ್ಳಿ ಸಮೀಪದ ಶಿರಸಿ ಹುಬ್ಬಳ್ಳಿ ರಾಜ್ಯ ಹೆದ್ದಾರಿಯಲ್ಲಿನ ಸೇತುವೆ ಕೆಳಗಡೆ ಹಾಕಿದ್ದ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ.

ಹಾನಗಲ್ ಪಟ್ಟಣದ ನೆಹರು ನಗರ ನಿವಾಸಿ (ಹೊಸನಗರ) ಮುಬೀನಾ ಬಾನು (35) ಕೊಲೆಯಾದ ಮಹಿಳೆ  ಎಂದು ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಬೀನಾರ ಪತಿ ಶೇಖ್ (45) ಮತ್ತು ಆತನ ಅಕ್ಕನ ಮಗ ಲೋಹಾರ(22)ನನ್ನು ಪೊಲೀಸರು ಬಂಧಿಸಿದ್ದಾರೆ. 

ಹಾವೇರಿ ಜಿಲ್ಲೆ ಮಲೆಬೆನ್ನೂರಿನ ಮುಬೀನಾರನ್ನು ಹಾನಗಲ್ ಪಟ್ಟಣದ ಶೇಖ್ನಿಗೆ ಮದುವೆ ಮಾಡಲಾಗಿತ್ತು. ಮದುವೆಯಾದ ನಂತರ ಇವರಿಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು. ಮುಬೀನಾ ಹೊಟ್ಟೆಪಾಡಿಗೆ ಇತರರ ಮನೆಕೆಲಸಕ್ಕೆ ಹೋಗುತ್ತಿದ್ದಳು ಎನ್ನಲಾಗಿದೆ. ಶೇಖ್ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನಲ್ಲಿ ಕಬ್ಬಿನ ಜ್ಯೂಸ್ ವ್ಯಾಪಾರ ಮಾಡುತ್ತಿದ್ದ ಎಂದು ಹೇಳಲಾಗಿದೆ. 

ಆರೋಪಿ ಮುಬೀನಾಳಿಗೆ ವಿಚ್ಛೇದನ ಕೊಡಲು ಮುಂದಾಗಿದ್ದು, ಹಾನಗಲ್ ನಲ್ಲಿರುವ ಮನೆಯನ್ನು ತನ್ನ ಹೆಸರಿಗೆ ಮಾಡಿದರೆ ಮಾತ್ರ ವಿಚ್ಛೇದನಕ್ಕೆ ಒಪ್ಪಿಕೊಳ್ಳುವುದಾಗಿ ಆಕೆ ಹೇಳಿದ್ದಳು ಎಂದು ಹೇಳಲಾಗಿದೆ. ಇದರಿಂದ ಕೋಪಗೊಂಡ ಶೇಖ್ ಮುಬೀನಾಳ ಕುತ್ತಿಗೆ ಹಿಸುಕಿದ್ದು, ಆಕೆ ಉಸಿರುಗಟ್ಟಿ ಮೃತಪ್ಟಿದ್ದಳು. ಈ ಸಂದರ್ಭ ಶೇಖ್ ತನ್ನ ಅಕ್ಕನ ಮಗನ ಸಹಕಾರದಿಂದ ಆಕೆಯನ್ನು ಕಾರಿನಲ್ಲಿ ಸಾಗಿಸಿ ಸೇತುವೆಯ ಮೇಲಿನಿಂದ ಎಸೆದಿದ್ದ. ಈ ಸಂದರ್ಭ ಮುಬೀನಾ ಉಸಿರಾಡುತ್ತಿರುವುದನ್ನು ಗಮನಿಸಿ ಕಲ್ಲೊಂದರಿಂದ ಆಕೆಯ ತಲೆಯನ್ನು ಚಚ್ಚಿದ್ದ ಎನ್ನಲಾಗಿದೆ.

ಡಿಎಸ್‌ಪಿ ನಾಗೇಶ ಶೆಟ್ಟಿ ಮಾರ್ಗದರ್ಶನದಲ್ಲಿ ಕಿರಣಕುಮಾರ ನಾಯಕ ನೇತೃತ್ವದಲ್ಲಿ ಎಎಸ್ಸೈ ಅಶೋಕ ರಾಠೋಡ, ಪೇದೆಗಳಾದ ಶಿವರಾಜ ಹಾಗೂ ರಾಮಕೃಷ್ಣ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News