150 ಸೀಟು ಗೆಲ್ಲುವುದು 'ಕಾಂಗ್ರೆಸ್' ಗುರಿ:ಬಿಜೆಪಿ ಉಸ್ತುವಾರಿ ಮುರಳೀಧರ್ ರಾವ್

Update: 2017-05-06 09:46 GMT

ಮೈಸೂರು, ಮೇ 6: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಿಶನ್-150 ಸೀಟುಗಳನ್ನು ಗೆಲ್ಲುವುದು 'ಕಾಂಗ್ರೆಸ್‌'ನ ಗುರಿಯಾಗಬೇಕೆಂದು ಬಿಜೆಪಿಯ ಉಸ್ತುವಾರಿ ಮುರಳೀಧರ ರಾವ್ ಬಾಯ್ತಿಪ್ಪಿ ಹೇಳಿ ಮುಜುಗರಕ್ಕೆ ಒಳಗಾದ ಘಟನೆ ನಡೆದಿದೆ.

ಬಿಜೆಪಿಯ ದ್ವಿದಿನ ರಾಜ್ಯ ಕಾರ್ಯಕಾರಣಿ ಸಭೆ ಶನಿವಾರ ಇಲ್ಲಿ ಆರಂಭವಾಗಿದ್ದು, ಸಭೆಯಲ್ಲಿ ಮೈಸೂರು ಪೇಟ ಹಾಗೂ ಶಾಲು ಹೊದಿಸಿ ಸನ್ಮಾನಿಸಲ್ಪಟ್ಟ ಮುರಳೀಧರ ರಾವ್ ಸಭೆಯನ್ನುದ್ದೇಶಿಸಿ ಮಾತನಾಡುವಾಗ ಮುಂಬರುವ ಅಸೆಂಬ್ಲಿ ಚುನಾವಣೆಯಲ್ಲಿ ‘ಬಿಜೆಪಿ’ ಎಂದು ಹೇಳುವ ಬದಲಿಗೆ ‘ಕಾಂಗ್ರೆಸ್’ 150 ಸೀಟು ಗೆಲ್ಲಲೇಬೇಕು ಎಂದು ಹೇಳಿದ್ದರು. ಮುರಳೀಧರ್ ಹೇಳಿಕೆಗೆ ಕಾರ್ಯಕರ್ತರು, ನಾಯಕರು ಒಂದು ಕ್ಷಣ ತಬ್ಬೀಬಾದರು.

ಮುರಳೀಧರ್ ಹಿಂದಿಯಲ್ಲಿ ಭಾಷಣ ಮಾಡುತ್ತಿದ್ದಾಗ ಕೆಲವು, ನಾಯಕರು ನಿದ್ದೆಗೆ ಜಾರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News