ಬೆದರಿಸಿ ಹಣ ದೋಚುತ್ತಿದ್ದ ನಕಲಿ ಲೋಕಾಯುಕ್ತನ ಬಂಧನ
Update: 2017-05-06 12:09 GMT
ಕೋಲಾರ, ಮೇ 6: ಅಧಿಕಾರಿಗಳನ್ನು ಬೆದರಿಸಿ ಹಣ ದೋಚುತ್ತಿದ್ದ ನಕಲಿ ಲೋಕಾಯುಕ್ತ ಅಧಿಕಾರಿಯನ್ನು ಬಂಧಿಸುವಲ್ಲಿ ನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಂಗಳೂರು ಮೂಲದ ಟಿ.ಎಸ್.ತ್ಯಾಗರಾಜ್ ಎಂಬಾತನೇ ಬಂಧಿತ ಆರೋಪಿ. ಈತ ಕೋಲಾರದ ಕೆಎಚ್ಎಸ್ ಡಿಆರ್ ಪಿ ಸಹಾಯಕ ಕಾರ್ಯಪಾಲಕ ಅಭಿಯಂತರ ಕೃಷ್ಣಮೂರ್ತಿಗೆ ಕರೆ ಮಾಡಿ ತಾನೊಬ್ಬ ಲೋಕಾಯುಕ್ತ ಅಧಿಕಾರಿ ಎಂದು ಬೆದರಿಸಿ ಸುಮಾರು 1.5 ಲಕ್ಷ ರೂ. ಹಣ ಪಡೆದಿದ್ದ. ಈ ಕುರಿತು ಅನುಮಾನಗೊಂಡ ಕೃಷ್ಣಮೂರ್ತಿ ಕೋಲಾರ ನಗರ ಪೊಲೀಸರಿಗೆ ದೂರು ನೀಡಿದರು.ಕೋಲಾರ ಮಾತ್ರವಲ್ಲದೆ ರಾಮನಗರ, ಬೆಂಗಳೂರು ಬಿಬಿಎಂಪಿ, ಹಾಸನ ಜಿಲ್ಲೆಗಳಲ್ಲಿ ಅಧಿಕಾರಿಗಳಿಗೆ ಬೆದರಿಸಿ ಹಣ ಲಪಟಾಯಿಸಿರುವ ಪ್ರಕರಣಗಳು ತ್ಯಾಗರಾಜ್ ಮೇಲೆ ದಾಖಲಾಗಿವೆ.