ಮೌಢ್ಯದ ಪರಮಾವಧಿ: ಮಳೆ ಬರದ ಕಾರಣ ಹೂತಿದ್ದ ಶವಗಳನ್ನು ತೆಗೆದು ಸುಟ್ಟು ಹಾಕಿದರು!

Update: 2017-05-06 15:25 GMT

ಗುಂಡ್ಲುಪೇಟೆ, ಮೇ 6: ಮಳೆ ಬೀಳುತ್ತಿಲ್ಲ ಎಂಬ ಕಾರಣದಿಂದ ಕೆಲವು ತಿಂಗಳ ಹಿಂದೆ ಹೂತಿದ್ದ ಶವಗಳನ್ನು ಹೊರತೆಗೆದು ಸುಟ್ಟುಹಾಕಿದ ಘಟನೆ ತಾಲೂಕಿನ ರಾಘವಾಪುರ ಗ್ರಾಮದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಗ್ರಾಮದ ಸುಬ್ಬಮ್ಮ(70) ಹಾಗೂ ಜಯಮ್ಮ(70) ಎಂಬವರು ಕೆಲ ತಿಂಗಳ ಹಿಂದೆ ಸಾವಿಗೀಡಾಗಿದ್ದರು. ತೊನ್ನು ರೋಗ ಇದ್ದವರನ್ನು ಸುಡದೆ ಭೂಮಿಯಲ್ಲಿ ಹೂತು ಹಾಕಲಾಗಿರುವುದರಿಂದ ಮಳೆ ಬರುತ್ತಿಲ್ಲ ಎಂದು ಭಾವಿಸಿದ ಗ್ರಾಮಸ್ಥರು ಹೂತುಹಾಕಲಾಗಿದ್ದ ಇಬ್ಬರು ಮಹಿಳೆಯರ ಶವವನ್ನು ಹೊರತೆಗೆದು ಸುಟ್ಟು ಹಾಕಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News