ಗೋಣಿಬೀಡು ದರ್ಗಾದಲ್ಲಿ ಉರೂಸ್: ಮಳೆಗಾಗಿ ವಿಶೇಷ ಪ್ರಾರ್ಥನೆ

Update: 2017-05-06 17:56 GMT

ಮೂಡಿಗೆರೆ, ಮೇ 6: ಗೋಣಿಬೀಡಿನ ಅಲ್ ಹಾಜ್ ಸೈಯದ್ ಶರ್ಪುದ್ದೀನ್ ಶಾಖಾದ್ರಿ ಮತ್ತು ಹಝ್ರತ್ ಸೈದಾನಿ ಬೀಬಿ ದರ್ಗಾದಲ್ಲಿ ಉರೂಸ್ ಕಾರ್ಯಕ್ರಮ ನಡೆದಿದ್ದು, ಮಳೆಗಾಗಿ ವಿಶೇಷ ಪ್ರಾರ್ಥನೆ ನೆರವೇರಿತು

ಗ್ರಾಮದ ಪ್ರಮುಖ ಬೀದಿಗಳಲ್ಲಿ ದಫ್ ಪ್ರದರ್ಶನದೊಂದಿಗೆ ಸಂದಲ್ ಮೆರವಣಿಗೆಯಲ್ಲಿ ನಡೆಯಿತು. ಈ ವೇಳೆ ಗ್ರಾಮದ ಶ್ರದ್ಧಾಳುಗಳು ಹೂವು, ಸಕ್ಕರೆಯನ್ನು ಅರ್ಪಿಸಿದರು. ದರ್ಗಾದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ನೆರವೇರಿದ ಬಳಿಕ ನೆರೆದ ಜನರಿಗೆ ಅನ್ನದಾನ ಮಾಡಲಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News