ಓ.. ಮೆಣಸೇ

Update: 2017-05-07 18:53 GMT

ಮುಂಬರುವ ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ರಾಜ್ಯ ಉಸ್ತುವಾರಿ ದಿಗ್ವಿಜಯ್ ಸಿಂಗ್‌ರನ್ನು ಬದಲಾಯಿಸಲಾಗಿದೆ
- ಡಾ.ಜಿ.ಪರಮೇಶ್ವರ್, ಸಚಿವ
ಆಡಳಿತ ವೈಖರಿ ಬದಲಾಗದೆ, ಯಾರನ್ನು ಬದಲಾಯಿಸಿಯೂ ಪ್ರಯೋಜನವಿಲ್ಲ.

---------------------
ಪ್ರಿಯಾಂಕಾ ಬಂದರೆ ಕಾಂಗ್ರೆಸ್ ಚೇತರಿಕೆ

-ಲಾಲು ಪ್ರಸಾದ್ ಯಾದವ್, ಬಿಹಾರ ಮಾಜಿ ಮುಖ್ಯಮಂತ್ರಿ
ಮತದಾರರಿಗೆ ದೇಶದ ಚೇತರಿಕೆ ಮುಖ್ಯವೇ ಹೊರತು, ಕಾಂಗ್ರೆಸ್‌ನ ಚೇತರಿಕೆಯಲ್ಲ.

---------------------
ವಿಐಪಿ ಸಂಸ್ಕೃತಿ ಹೋಗಿ ಇಪಿಐ ಸಂಸ್ಕೃತಿ ಬರಬೇಕು
-ನರೇಂದ್ರ ಮೋದಿ, ಪ್ರಧಾನಿ
ಭಾರತ ಶಿಲಾಯುಗದ ಸಂಸ್ಕೃತಿಯ ಕಡೆಗೆ ಹೊರಳುತ್ತಿರುವುದರ ಬಗ್ಗೆ ಏನು ಹೇಳುತ್ತೀರಿ?
---------------------
ರಾಜ್ಯ ಬಿಜೆಪಿಯಲ್ಲಿ ಭಿನ್ನಮತವಿಲ್ಲ, ಬಣಗಳು ಸೃಷ್ಟಿಯಾಗಿಲ್ಲ
-ಈಶ್ವರಪ್ಪ, ವಿ.ಪ.ವಿ.ನಾಯಕ
ರಾಜ್ಯ ಬಿಜೆಪಿ ಎಲ್ಲಿದೆ ಎಂದು ಜನರು ಕೇಳುತ್ತಿದ್ದಾರೇ?
---------------------
ಬಿಜೆಪಿ ಈಗ ಒಡೆದ ಮನೆ
-ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ    
ಒಟ್ಟಿನಲ್ಲಿ ಒಡೆಯುವುದು ಅವರಿಗೆ ಚಟವಾಗಿ ಬಿಟ್ಟಿದೆ. ಯಾರ ಮನೆ ಆದರೂ ಸರಿ.

---------------------
ಬಿಜೆಪಿಗಾಗಿ ನನ್ನ ಸೇವೆ ಸಮರ್ಪಣೆ

-ಎಸ್.ಎಂ.ಕೃಷ್ಣ , ಮಾಜಿ ಮುಖ್ಯಮಂತ್ರಿ
ಉಪಚುನಾವಣೆಯಲ್ಲಿ ನಿಮ್ಮ ಸೇವೆ ಚೆನ್ನಾಗಿಯೇ ಪರಿಣಾಮ ಬೀರಿದೆ.

---------------------
ಇನ್ನು 5 ವರ್ಷಗಳಲ್ಲಿ ವಿದೇಶಿ ಕಂಪೆನಿಗಳನ್ನು ಅಳಿಸಿ ಹಾಕುವೆ
-ಬಾಬಾ ರಾಮ್‌ದೇವ್, ಯೋಗಗುರು
ಅಷ್ಟರೊಳಗೆ ನಿಮ್ಮ ಉತ್ಪನ್ನ ಸೇವಿಸಿದ ಗ್ರಾಹಕರು ಬದುಕುಳಿದರೆ...
---------------------

ದುಬಾರಿ ಮದುವೆ ಮಾಡಿದ ನಿತಿನ್ ಗಡ್ಕರಿ, ಅನಂತ್ ಕುಮಾರ್‌ಗೆ ಪ್ರಧಾನಿ ಮೋದಿ ಛೀಮಾರಿ ಹಾಕಬೇಕಿತ್ತು

-ಡಾ.ಪಾಟೀಲ್ ಪುಟ್ಟಪ್ಪ, ಹಿರಿಯ ಸಾಹಿತಿ
ಸರಳ ಮದುವೆಯಾಗಿ ಪತ್ನಿಯನ್ನು ಕೈಬಿಟ್ಟ ಮೋದಿಗೆ ಛೀಮಾರಿ ಹಾಕುವವರು ಯಾರು?
---------------------

ಬರ ನಿರ್ವಹಣೆಯಲ್ಲಿ ಕರ್ನಾಟಕ ರಾಜ್ಯ ಮೊದಲ ಸ್ಥಾನದಲ್ಲಿದೆ
- ಯು.ಟಿ.ಖಾದರ್, ಸಚಿವ
ಅಂದರೆ ಬರಪರಿಹಾರಗಳೆಲ್ಲ ಸೇರುವ ಜಾಗ ಸೇರಿಯಾಗಿದೆಯೆ?
---------------------

ಪೇಜಾವರ ಸ್ವಾಮೀಜಿ ಮಠಾಧೀಶರೋ, ರಾಜಕಾರಣಿಯೋ ಎಂಬುದನ್ನು ಸ್ಪಷ್ಟಪಡಿಸಬೇಕು
-ಶ್ರೀರಾಮ ರೆಡ್ಡಿ, ಮಾಜಿ ಶಾಸಕ
ಮೊದಲು ಅವರು ತಾನು ಮನುಷ್ಯ ಎನ್ನುವುದನ್ನು ಸಾಬೀತು ಮಾಡಬೇಕಾಗಿದೆ.

---------------------
ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಬಿಜೆಪಿಗೆ ಒಂದು ದೊಡ್ಡ ಶಕ್ತಿ ಇದ್ದಂತೆ
-ಸಿ.ಟಿ.ರವಿ, ಶಾಸಕ
ಬಿಜೆಪಿ ಒಡೆದು ಹೋಳಾಗಿರುವುದೇ ಅವರು ಶಕ್ತಿವಂತರೆನ್ನುವುದಕ್ಕೆ ಸಾಕ್ಷಿ.

---------------------
ನನ್ನ ಸಂಪುಟದ ಎಲ್ಲರೂ ಸಸ್ಯಾಹಾರಿಗಳು
-ಯೋಗಿ ಆದಿತ್ಯನಾಥ್, ಉತ್ತರಪ್ರದೇಶ ಮುಖ್ಯಮಂತ್ರಿ
ಊಟದ ಬಳಿಕ ಬಾಳೆ ಎಲೆಯನ್ನೂ ಬಿಡುವುದಿಲ್ಲವಂತೆ.

---------------------

ಉತ್ತರ ಕೊರಿಯಾ ಕ್ಷಿಪಣಿ ಪರೀಕ್ಷೆ ನಡೆಸಿದರೆ ನಾನು ಸಂತೋಷವಾಗಿರಲು ಸಾಧ್ಯವಿಲ್ಲ
-ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ
ನೀವು ಸಂತೋಷವಾಗಿರಬಾರದು ಎಂದೇ ಅವರು ಪರೀಕ್ಷೆ ನಡೆಸಿರುವುದು.

---------------------
ಇನ್ನೊಂದು ವರ್ಷ ನಾನು, ಸಿಎಂ ನಿದ್ದೆ ಮಾಡೋದಿಲ್ಲ
- ಡಾ.ಜಿ.ಪರಮೇಶ್ವರ್, ಸಚಿವ
ಅಂದರೆ ಈವರೆಗೆ ನಿದ್ದೆ ಮಾಡುತ್ತಿದ್ದಿರಿ ಎಂದಾಯಿತು

---------------------

ನಕ್ಸಲರು ಭದ್ರತಾ ಸಿಬ್ಬಂದಿಯ ಬದಲು ದೇಶವನ್ನು ಲೂಟಿ ಮಾಡುತ್ತಿರುವ ರಾಜಕೀಯ ನಾಯಕರನ್ನು ಗುಂಡಿಟ್ಟು ಕೊಲ್ಲಬೇಕು
- ಪಪ್ಪು ಯಾದವ್, ಮಾಜಿ ಸಂಸದ
ಮೊದಲ ಬಲಿ ನೀವೇ ಆಗುವ ಸಾಧ್ಯತೆ ಇದೆ.

---------------------

ಉಗ್ರವಾದ ಮತ್ತು ಕ್ರೀಡೆ ಜೊತೆಯಾಗಿ ಸಾಗಲು ಸಾಧ್ಯವಿಲ್ಲ
-ವಿಜಯ್ ಗೋಯಲ್, ಕೇಂದ್ರ ಸಚಿವ
ಉಗ್ರರಿಗೆ ಹಿಂಸೆಯೇ ಕ್ರೀಡೆ.

---------------------
ಪ್ರಧಾನಿ ಮೋದಿ ರಾಷ್ಟ್ರ ಋಷಿ
-ಬಾಬಾ ರಾಮ್‌ದೇವ್, ಯೋಗಗುರು
ಮತ್ತು ನೀವು ಅವರ ಮುಂದೆ ನರ್ತಿಸುತ್ತಿರುವ ಮೇನಕೆಯೇ?
---------------------

ಉಡುಪಿಗೂ ಕನಕದಾಸರಿಗೂ ಸಂಬಂಧವಿದೆ
- ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ

ನಿಮಗೂ ಕನಕದಾಸರಿಗೂ ಇರುವ ಸಂಬಂಧ ಹೇಳಿ.

     ---------------------

ರಾಹುಲ್ ಗಾಂಧಿ ದೇಶದಾದ್ಯಂತ ಹೊಸ ತಂಡ ಕಟ್ಟುತ್ತಿದ್ದಾರೆ
-ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ಕಾಂಗ್ರೆಸ್ ನಾಯಕ

ಯಾವ ಆಟ ಆಡುವುದಕ್ಕೆ?

Writer - ಪಿ.ಎ. ರೈ

contributor

Editor - ಪಿ.ಎ. ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...