ಬೆಂಕಿ ತಗಲಿ ಗುಡಿಸಲು ಭಸ್ಮ
Update: 2017-05-14 23:43 IST
ಹುಳಿಯಾರು, ಮೇ 14: ತೆಂಗಿನಮರಕ್ಕೆ ಬಡಿದ ಸಿಡಿಲಿನ ಬೆಂಕಿ ಮರದ ಪಕ್ಕದಲ್ಲಿನ ಗುಡಿಸಲಿಗೆ ತಗಲಿ ಗುಡಿಸಲು ಸಂಪೂರ್ಣವಾಗಿ ಭಸ್ಮವಾದ ಘಟನೆ ಹುಳಿಯಾರು ಸಮೀಪದ ಸೀಗೆಬಾಗಿನಲ್ಲಿ ನಡೆದಿದೆ.
ಇಲ್ಲಿನ ನಿವಾಸಿ ಲಿಂಗದೇವರು ಎಂಬವರ ಗುಡಿಸಲಿಗೆ ಬೆಂಕಿ ತಗಲಿದ ಪರಿಣಾಮ ಗುಡಿಸಲು ಭಸ್ಮವಾಗಿ, ಅಪಾರ ನಷ್ಟವಾಗಿದೆ ಎಂದು ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.