ಹೃದಯಾಘಾತದಿಂದ ನಿಧನ
Update: 2017-05-16 22:49 IST
ಸುಂಟಿಕೊಪ್ಪ,ಮೇ 16: ಮಾದಾಪುರ ರಸ್ತೆಯಲ್ಲಿರುವ ಮಧುರಮ್ಮ ಬಡಾವಣೆಯ ನಿವಾಸಿ ಬಿ.ಎಸ್.ವೆಂಕಪ್ಪ ರೈ(71) ಮಂಗಳವಾರ ಬೆಳಗ್ಗೆ 11 ಗಂಟೆಗೆ ಹೃದಯಾಘಾತದಿಂದ ನಿಧನ ಹೊಂದಿದರು.
ಮೃತರು ಪತ್ನಿ, ಮೂವರು ಮಕ್ಕಳು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಸುಂಟಿಕೊಪ್ಪದ ರುದ್ರಭೂಮಿಯಲ್ಲಿ ನೆರವೇರಿತು.