ವೃದ್ಧನ ಮೇಲೆರಗಿದ ಕರಡಿಗಳು

Update: 2017-05-18 03:53 GMT

ಮಧುಗಿರಿ, ಮೇ 18: ವೃದ್ಧರೊಬ್ಬರ ಮೇಲೆ 3 ಕರಡಿಗಳು ದಾಳಿ ನಡೆಸಿದ ಘಟನೆ ತಾಲೂಕಿನ ಮಿಡಿಗೇಶಿ ಹೋಬಳಿಯ ಗಂಪಲಹಳ್ಳಿಯಲ್ಲಿ ನಡೆದಿದೆ.

ರಾಮಣ್ಣ (72) ಕರಡಿ ದಾಳಿಗೊಳಗಾದವರು. ದಾಳಿಯಿಂದ ರಾಮಣ್ಣ ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ. ರಾತ್ರಿ ಹೊಲದಿಂದ ಬರುವಾಗ 3 ಕರಡಿಗಳು ಏಕಾಏಕಿ ದಾಳಿ ನಡೆಸಿದ್ದು, ಈ ಸಂದರ್ಭ ರಾಮಣ್ಣ ಕೂಗಿಕೊಂಡಿದ್ದಾರೆ. ಇದರಿಂದಾಗಿ ಪಕ್ಕದ ತೋಟದ ಮನೆಯವರು ಬೆಳಕು ಹಾಯಿಸಿದಾಗ ಕರಡಿಗಳು ಅವರನ್ನು ಬಿಟ್ಟು ಓಡಿಹೋಗಿವೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News