ಚಾಮರಾಜನಗರ: ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ
Update: 2017-05-18 14:51 GMT
ಚಾಮರಾಜನಗರ, ಮೇ 18: ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿಯೋರ್ವಳು ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚಾಮರಾಜ ನಗರದಲ್ಲಿ ನಡೆದಿದೆ.
ಚಾಮರಾಜನಗರದ ಸರ್ಕಾರಿ ಇಂಜನೀಯರ್ ಕಾಲೇನಿನಲ್ಲಿ ವ್ಯಾಸಾಂಗ ಮಾಡುತ್ತಿದ್ದ ಆರ್. ರಕ್ಷಿತಾ ವಸತಿ ನಿಲಯದ ಬಳಿ ಆತ್ಮಹತ್ಯೆಗೆ ಯತ್ನಸಿದ್ದು, ಈಕೆ ಮೂಲತಃ ಮಂಡ್ಯದವರಾಗಿದ್ದು, ಮೈಸೂರಿನ ಗಂಗೋತ್ರಿ ಬಡಾವಣೆಯಿಂದ ನಿತ್ಯ ಕೆಎಸ್ಸಾರ್ಟಿಸಿ ಬಸ್ನಲ್ಲಿ ಚಾಮರಾಜನಗರಕ್ಕೆ ಬಂದು ವ್ಯಾಸಾಂಗ ಮಾಡುತ್ತಿದ್ದಳು.
ಕುರುಬರಹುಂಡಿ ಗ್ರಾಮದ ಶ್ರೀನಿವಾಸ್ ನೊಂದಿ ಆಕೆಯ ವಿವಾಹವಾಗಿತ್ತು ಎಂದು ತಿಳಿದುಬಂದಿದ್ದು, ಈ ನಡುವೆ ಶ್ರೀನಿವಾಸ್ ಸಹೋದರಿ ಕಾಲೇಜಿಗೆ ತೆರಳಿ ರಕ್ಷಿತಾಳನ್ನು ಅವಮಾನಿಸಿ, ಆಕೆಯ ಕುತ್ತಿಗೆಯಲ್ಲಿದ್ದ ಮಾಂಗಲ್ಯವನ್ನು ಕಿತ್ತಿದ್ದಳು ತಿಳಿದುಬಂದಿದೆ. ಇದರಿಂದ ನೊಂದ ರಕ್ಷಿತಾ ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಇಲ್ಲಿನ ಠಾಣೆಯಲ್ಲಿ ದೂರು ದಾಖಲಾಗಿದೆ.