ಯುವಕ ನಾಪತ್ತೆ
Update: 2017-05-20 12:49 GMT
ಚಿಕ್ಕಮಗಳೂರು, ಮೇ 20: ತರೀಕೆರೆ ತಾಲ್ಲೂಕು ಬುಕ್ಕಂಬೂದಿ ನಿವಾಸಿ ಅರುಣಕುಮಾರ್ (29) ಎಂಬ ವ್ಯಕ್ತಿ ನಾಪತ್ತೆಯಾಗಿರುವ ಬಗ್ಗೆ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
5.7 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕೋಲು ಮುಖ, ಕನ್ನಡ, ತಮಿಳು ಹಾಗೂ ಇಂಗ್ಲಿಷ್ ಮಾತನಾಡುವ ಈತನ ಮಾಹಿತಿ ಇದ್ದಲ್ಲಿ ಅಜ್ಜಂಪುರ ಠಾಣೆ ದೂ. ಸಂ 08261-245133, 222266, ಹಾಗೂ 08262-253403, 235608 ಇವರನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದೆ.