ತಾಪಂ ಅಧ್ಯಕ್ಷರ ವಿರುದ್ಧ ಕ್ರಮಕ್ಕೆ ಆಗ್ರಹ

Update: 2017-05-22 17:31 GMT

ಹೊನ್ನಾವರ, ಮೇ 22: ತಾಲೂಕಿನ ಉಪ್ರೋಣಿ ಸಮೀಪದ ಅಳ್ಳಂಕಿಯಲ್ಲಿ ಅನೈತಿಕ ಸಂಬಂಧ ನಡೆಸಲು ಹೋಗಿ ಸಿಕ್ಕಿಬಿದ್ದ ಹೊನ್ನಾವರ ತಾಲೂಕು ಪಂಚಾಯತ್ ಅಧ್ಯಕ್ಷ ಅಣ್ಣಯ್ಯ ಮಹಾಬಲೇಶ್ವರ ನಾಯ್ಕನ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಜಿಲ್ಲಾ ಕಾಂಗ್ರೆಸ್ ಸಮಿತಿಗೆ ಸ್ಥಳೀಯ ಬ್ಲಾಕ್ ಕಾಂಗ್ರೆಸ್ ಸಮಿತಿಯ ಮುಖಂಡರು ಒತ್ತಾಯಿಸಿದ್ದಾರೆ.


ಹೊನ್ನಾವರ ತಾಲೂಕಿನ ಉಪ್ರೋಣಿ ಸಮೀಪದ ಅಳ್ಳಂಕಿಯಲ್ಲಿ ಮೇ 8ರಂದು ತಾಲೂಕು ಪಂಚಾಯತಿ ಅಧ್ಯಕ್ಷ ಅಣ್ಣಯ್ಯ ನಾಯ್ಕ ಈತನು ಪರ ಸ್ತ್ರೀ ಸಹವಾಸದಲ್ಲಿ ಇರುವಾಗ ಸ್ಥಳೀಯರು ಹಿಡಿದು ಧರ್ಮದೇಟು ನೀಡಿ ಕೆಲವು ತಾಸುಗಳ ಕಾಲ ಕೂಡಿ ಹಾಕಿದ್ದರು ಎಂದು ರಾಜ್ಯಮಟ್ಟದ ಟಿವಿ ಚಾನಲ್ ಮತ್ತು ಪತ್ರಿಕೆಗಳಲ್ಲಿ ಪ್ರಸಾರವಾಗಿತ್ತು.

ಈ ವಿಷಯ ಪಕ್ಷಕ್ಕೆ ತೀವೃ ಮುಜುಗರ ಮತ್ತು ಘನತೆಗೆ ಧಕ್ಕೆ ಉಂಟು ಮಾಡಿದೆ ಹೀಗಾಗಿ ತಾಪಂ ಅಧ್ಯಕ್ಷ ಅಣ್ಣಯ್ಯ ನಾಯ್ಕ ಹಾಗೂ ಸದಸ್ಯೆಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಂಕಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News