ರೈತ ಆತ್ಮಹತ್ಯೆ
Update: 2017-05-22 17:58 GMT
ಮೂಡಿಗೆರೆ, ಮೇ.22: ಸಾಲದ ಭಾದೆ ತಾಳಲಾರದೆ ಬಣಕಲ್ ಹೋಬಳಿ ಭಾಗದ ಬೆಟಗೆರೆ ಗ್ರಾಮದ ಮುದ್ದುಗೌಡ (53) ಎಂಬವರು ಕೀಟನಾಶಕವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮುದ್ದುಗೌಡರು ಬಕ್ಕಿ ಗ್ರಾಮದಲ್ಲಿ ಸುಮಾರು 3.50 ಎಕರೆ ಭೂಮಿಯನ್ನು ಹೊದಿದ್ದರು. ಅವರು ಜಮೀನು ಅಭಿವೃದ್ಧಿಗಾಗಿ ತ್ರಿಪುರ ಬ್ಯಾಂಕಿನಲ್ಲಿ 1.50 ಲಕ್ಷ ರೂ.ಗಳು, ಅಲ್ಲದೇ ಕೈಗಡ ರೂಪದಲ್ಲಿ ಗ್ರಾಮದ ಕೆಲವು ಗೆಳೆಯರಿಂದ ಸಾಲ ಪಡೆದುಕೊಂಡಿದ್ದರು.
ಸಾಲಗಾರರಿಗೆ ಸಾಲದ ಮರುಪಾವತಿ ವಿಚಾರದಲ್ಲಿ ತೀವ್ರ ನೊಂದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಮನನೊಂದು ಕೀಟನಾಶಕ ಸೇವಿಸಿ ಅಸ್ವಸ್ಥಗೊಂಡಿದ್ದ ಅವರನ್ನು ತಕ್ಷಣ ಮೂಡಿಗೆರೆ ಎಂಜಿಎಂ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಹಾಸನ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮದ್ಯೆ ಅವರು ಮೃತಪಟ್ಟಿದ್ದಾರೆ ಎಂದು ಇಲ್ಲಿನ ಆಸ್ಪತ್ರೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.