​ಜೂಜಾಟ: ನಾಲ್ವರ ಬಂಧನ

Update: 2017-05-23 17:24 GMT

ಚಿಕ್ಕಮಗಳೂರು, ಮೇ 23: ಅಕ್ರಮ ಅಂದರ್ ಬಾಹರ್ ಹೆಸರಿನ ಜೂಜಾಟದಲ್ಲಿ ತೊಡಗಿದ್ದ ಆರೋಪದಡಿ ನಾಲ್ವರು ಆರೋಪಿಗಳನ್ನು ಕಡೂರು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

  ಆರೋಪಿಗಳನ್ನು ಕಡೂರು ತಾಲೂಕಿನ ಬೆಂಕಿ ಕಾಲನಿಯ ಶ್ರೀನಿವಾಸ್ ನಾಯ್ಕ್ಕ, ಇಲಿಯಾಸ್, ಲೋಕೇಶ್ ನಾಯ್ಕ ಮತ್ತು ಪ್ರಮೋದ್ ಎಂದು ಗುರುತಿಸಲಾಗಿದೆ.

ಆರೋಪಿಗಳು ಚಿಕ್ಕಂಗಳ ಮತ್ತು ಗೋವಿಂದ ಪುರ ರಸ್ತೆಯಲ್ಲಿ ಅಕ್ರಮ ಅಂದರ್-ಬಾಹರ್ ಜೂಜಾಟ ನಡೆಸುತ್ತಿದ್ದರು. ಆರೋಪಿಗಳು ಜೂಜಾಟಕ್ಕೆ ಬಳಸಿದ್ದ 11,200 ರೂ. ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News