​ಹೊಟ್ಟೆನೋವು: ವ್ಯಕ್ತಿ ಆತ್ಮಹತ್ಯೆ

Update: 2017-05-23 17:25 GMT

ಚಿಕ್ಕಮಗಳೂರು, ಮೇ 23: ಹೊಟ್ಟೆನೋವು ತಾಳಲಾರದೇ ವ್ಯಕ್ತಿಯೋರ್ವ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಸವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ನೆಹರು ನಗರದಲ್ಲಿ ಮಂಗಳವಾರ ನಡೆದಿದೆ.
  ಆತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನು ನೆಹರು ನಗರದ ಸೋಮಶೇಖರ್(43) ಎಂದು ಗುರುತಿಸಲಾಗಿದೆ. ಈತ ಕಿಡ್ನಿಸ್ಟೋನ್‌ನಿಂದ ಹಲವು ವರ್ಷಗಳಿಂದ ಬಳಲಿದ್ದ. ಅನೇಕ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದರೂ ಪ್ರಯೋಜನವಾಗಿರಲಿಲ್ಲ.

ಈ ಹಿನ್ನೆಲೆಯಲ್ಲಿ ಮನನೊಂದು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಮೃತನ ಪತ್ನಿ ವೇದಾವತಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

Writer - ಚಿಕ್ಕಮಗಳೂರು

contributor

Editor - ಚಿಕ್ಕಮಗಳೂರು

contributor

Similar News