​ಮನೆಗೆ ನುಗ್ಗಿ ಸೊತ್ತು ಕಳವು

Update: 2017-05-23 17:26 GMT

ಕುಂದಾಪುರ, ಮೇ 23: ಹಂಗಳೂರು ಗ್ರಾಮದ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಅಪಾರ ಪ್ರಮಾಣದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಹಂಗಳೂರಿನ ಶರೀನ್ ಎಸ್.ಹೆಗ್ಡೆ ಎಂಬವರ ಮನೆಗೆ ಮೇ 21ರಂದು ಮುಂಭಾಗದ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು, ಕೋಣೆಯಲ್ಲಿನ ಕಪಾಟಿನ ಬಾಗಿಲು ಒಡೆದು ಅದರಲ್ಲಿದ್ದ ಎರಡು ಜೊತೆ ವಜ್ರದ ಕಿವಿಯ ಟಿಕ್ಕಿಗಳು, ಒಂದು ಜೊತೆ ಹವಳದ ಕಿವಿಯ ಟಿಕ್ಕಿ, ಬೆಳ್ಳಿಯ ವಸ್ತುಗಳು ಹಾಗೂ 5,000 ರೂ. ನಗದು ಮತ್ತು ಶರೀನ್ ಹೆಗ್ಡೆ ಅವರ ಬಸ್‌ನ ಆರ್.ಸಿ. ಪುಸ್ತಕ, ಇನ್ಶೂರೆನ್ಸ್ ಪತ್ರ ಮತ್ತು ಪಾಸಿಂಗ್ ಚೀಟಿಯನ್ನು ಕಳವು ಮಾಡಲಾಗಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News