ಸಾಹಿತ್ಯ ಸಮ್ಮೇಳನ: ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ತಂಡಗಳ ಆಹ್ವಾನ

Update: 2017-05-25 17:04 GMT

ಮಡಿಕೇರಿ, ಮೇ 25: ಮಡಿಕೇರಿ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್‌ನ ವತಿಯಿಂದ ಜೂನ್ 16ರಂದು ಮಡಿಕೇರಿಯಲ್ಲಿ ನಡೆಯಲಿರುವ 8ನೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಲು ಇಚ್ಚಿಸುವ ಮಡಿಕೇರಿ ತಾಲೂಕಿನ ಕಲಾವಿದರು ಕನ್ನಡ ನಾಡು- ನುಡಿ-ಸಂಸ್ಕೃತಿ ಹಾಗೂ ಜನಪದಕ್ಕೆ ಸಂಬಂಧಿಸಿದಂತೆ ಕನ್ನಡ ಭಾಷೆಯ ಕಾರ್ಯಕ್ರಮವನ್ನು ನೀಡತಕ್ಕದ್ದು.

ಅರ್ಜಿ ಸಲ್ಲಿಸಲು ಕಲಾತಂಡಗಳು ಕಾರ್ಯಕ್ರಮದ ವಿವರ, ಸಮಯ, ತಂಡದಲ್ಲಿರುವ ಕಲಾವಿ ದರ ಸಂಖ್ಯೆ ಹಾಗೂ ತಮ್ಮ ಸಂಪೂರ್ಣ ವಿಳಾಸದೊಂದಿಗೆ ದೂರವಾಣಿ ಸಂಖ್ಯೆ ಗಳನ್ನು ನಮೂದಿಸತಕ್ಕದ್ದು.

ಹೆಸರು ನೋಂದಾಯಿಸಲು ಜೂನ್ 5 ಕೊನೆಯ ದಿನವಾಗಿರುತ್ತದೆ. ಅರ್ಜಿ ಸಲ್ಲಿಸುವವರು ಭಾರತಿ ರಮೇಶ್, ಅಧ್ಯಕ್ಷರು, ಸಾಂಸ್ಕೃತಿಕ ವಿಭಾಗ, ಕನ್ನಡ ಸಾಹಿತ್ಯ ಪರಿಷತ್ ಕಚೇರಿ, ಕೋರ್ಟ್ ಹಿಂಭಾಗ, ಕೋಟೆ ಆವರಣ, ಮಡಿಕೇರಿ ಈ ವಿಳಾಸಕ್ಕೆ ಕಳುಹಿಸಬೇಕೆಂದು ಮನವಿ ಮಾಡಿದ್ದಾರೆ.

ಹೆಚ್ಚಿನ ವಿವರಗಳಿಗೆ ಮೊ. ಸಂ: 9448587915 ಅಥವಾ 9481058090, 8277829863ನ್ನು ಸಂಪರ್ಕಿಸಬಹುದು ಎಂದು ಮಡಿಕೇರಿ ಸಾಂಸ್ಕೃತಿಕ ವಿಭಾಗದ ಅಧ್ಯಕ್ಷರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News