​ವಂಚನೆ ಆರೋಪ: ಪ್ರಕರಣ ದಾಖಲು

Update: 2017-05-28 16:59 GMT

ಸಾಗರ, ಮೇ 28: ತಾಲೂಕಿನ ಕರೂರು ಹೋಬಳಿಯ ಅರಬಳ್ಳಿ ಗ್ರಾಮದಲ್ಲಿ ಯುವತಿಯೋರ್ವಳನ್ನು ನಂಬಿಸಿ ಮೋಸ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶನಿವಾರ ವ್ಯಕ್ತಿಯೊಬ್ಬನ ವಿರುದ್ಧ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ.

ತುಮರಿ ಸಮೀಪದ ಅರಬಳ್ಳಿ ವಾಸಿಯಾಗಿರುವ 17 ವರ್ಷದ ಯುವತಿಯೋರ್ವಳನ್ನು ಬೆಳೆಯೂರು ವಾಸಿ ಉದಯ್ ಎಂಬಾತ ಕಳೆದ ಎರಡು ವರ್ಷದಿಂದ ಪ್ರೀತಿಸುವ ನಾಟಕವಾಡಿದ್ದಾನೆ ಎನ್ನಲಾಗಿದ್ದು, ಕಳೆದ ವರ್ಷ ಯುವತಿಯನ್ನು ಚುಟ್ಟಿಕೆರೆ ಗ್ರಾಮದ ತಮ್ಮ ಸಂಬಂಧಿಕರೋರ್ವರ ಮನೆಗೆ ಕರೆದೊಯ್ದು ಉದಯ್, ಮದುವೆಯಾಗುವುದಾಗಿ ನಂಬಿಸಿ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ ಎನ್ನಲಾಗಿದೆ.

ಇದೀಗ ಯುವತಿ 7 ತಿಂಗಳ ಗರ್ಭಿಣಿಯಾಗಿದ್ದು, ಉದಯ್ ಮದುವೆಯಾಗಲು ನಿರಾಕರಿಸಿರುವ ಹಿನ್ನೆಲೆಯಲ್ಲಿ ಬೇಸತ್ತ ಯುವತಿ ಕಾರ್ಗಲ್ ಠಾಣೆಯಲ್ಲಿ ಆರೋಪಿ ವಿರುದ್ಧ್ದ ದೂರು ನೀಡಿದ್ದಾಳೆ.

ಪೊಲೀಸರು ಉದಯ್‌ನ ವಿರುದ್ಧ ಪೋಸ್ಕೊ ಹಾಗೂ ಕಲಂ 376ರ ಅಡಿ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News