ಓ ಮೆಣಸೇ…!

Update: 2017-05-29 07:11 GMT

ಪ್ರಧಾನಿ ಸೇರಿ ಬಿಜೆಪಿಯವರದ್ದು ಬರೀ ಬಣ್ಣದ ಮಾತುಗಳು - ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ

ಕೇಸರಿ ಬಣ್ಣದ ಮಾತುಗಳು ಎಂದರೆ ಇನ್ನಷ್ಟು ಅರ್ಥಪೂರ್ಣ.

---------------------

ಪಕ್ಷವು (ಬಿಜೆಪಿ) ತಾಯಿ ಇದ್ದಂತೆ - ವೆಂಕಯ್ಯ ನಾಯ್ಡು, ಕೇಂದ್ರ ಸಚಿವ

 ಆರೆಸ್ಸೆಸ್ ಮನೆಯಲ್ಲಿ ಜೀತಕ್ಕಿರುವ ತಾಯಿಗೆಂದು ಬಿಡುಗಡೆ?

---------------------

ಉಸಿರು ಇರುವವರೆಗೂ ನಾನು ಬಿಜೆಪಿಯಲ್ಲಿರುವೆ - ಜನಾರ್ದನ ರೆಡ್ಡಿ, ಮಾಜಿ ಸಚಿವ

ಹಾಗಾದರೆ ರಾಜ್ಯದಲ್ಲಿ ಬಿಜೆಪಿಗೆ ಉಸಿರಾಟ ಇನ್ನೂ ಕಷ್ಟವಾಗಬಹುದು.

---------------------

ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಮನ್ಯುಷರಂತೆ ನಡೆದುಕೊಳ್ಳುತ್ತಿಲ್ಲ - ಎಚ್.ವಿಶ್ವನಾಥ್, ಮಾಜಿ ಸಂಸದ

ದೇವರಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಹೇಳುವ ಪ್ರಯತ್ನವೇ?

---------------------

ಕಾಂಗ್ರೆಸ್‌ಗೆ ಹೈಕಮಾಂಡೇ ಇಲ್ಲ - ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

ನಿಮ್ಮನ್ನು ನಿಯಂತ್ರಿಸಲು ಕರಂದ್ಲಾಜೆಯವರು ಇದ್ದಂತೆ?

---------------------

ಕೇರಳದ ಯುವತಿ ಸನ್ಯಾಸಿಯ ಜನನಾಂಗ ಕತ್ತರಿಸಿದ್ದು ಸರಿಯಲ್ಲ - ಶಶಿ ತರೂರು, ಕಾಂಗ್ರೆಸ್ ನಾಯಕ

ಕುಂಬಳ ಕಾಯಿ ಕಳ್ಳ ಎಂದರೆ ತಾವು ಮುಟ್ಟಿ ನೋಡಿಕೊಂಡದ್ದು ಏನನ್ನು?

---------------------

ಗಡಿಯಲ್ಲಿ ಕಾಲು ಕೆರೆದು ಜಗಳಕ್ಕೆ ಬರುವ ಪಾಕಿಸ್ತಾನಕ್ಕೆ ಸೂಕ್ತ ಸಮಯದಲ್ಲಿ ಸೂಕ್ತ ಉತ್ತರ ನೀಡಲಾಗುವುದು - ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ

ಕಾಲು ಕೆರೆದು ಜಗಳಕ್ಕೆ ಬರುವ ಚೀನಕ್ಕೆ ಮೌನವೇ ಉತ್ತರವೇ?

---------------------

ಗೋವು ಕಟುಕರ ಕೈಸೇರದಂತೆ ಪ್ರತಿಯೊಬ್ಬರೂ ಎಚ್ಚರವಹಿಸಬೇಕು - ರಾಘವೇಶ್ವರ ಸ್ವಾಮೀಜಿ,

ರಾಮಚಂದ್ರಾಪುರ ಮಠ ಹೆಣ್ಣು ಮಕ್ಕಳೂ ಕಟುಕರ ಕೈ ಸೇರದಂತೆ ಎಚ್ಚರಿಕೆ ಬೇಡವೇ?

---------------------

ತಮಿಳುನಾಡಿನ ಸದ್ಯದ ರಾಜಕೀಯ ಪರಿಸ್ಥಿತಿಗೆ ರಜನಿಕಾಂತ್ ಯೋಗ್ಯರಲ್ಲ - ಸುಬ್ರಮಣಿಯನ್ ಸ್ವಾಮಿ,

ಬಿಜೆಪಿ ನಾಯಕ ಡ್ಯೂಪ್‌ನ್ನು ಬಳಸುವುದಕ್ಕೆ ಆದೇಶ ನೀಡಿದ್ದಾರಂತೆ.

---------------------

ಪ್ರತಿಯೊಬ್ಬ ಒಳ್ಳೆಯ ವ್ಯಕ್ತಿಯೂ ರಾಜಕೀಯಕ್ಕೆ ಬರಬೇಕು - ಅಮಿತ್ ಶಾ, ಬಿಜೆಪಿ ಅಧ್ಯಕ್ಷ

ಒಳ್ಳೆಯ ವ್ಯಕ್ತಿಗಳು ರಾಜಕೀಯಕ್ಕೆ ಬರಬೇಕಾದರೆ, ದುಷ್ಟ ವ್ಯಕ್ತಿಗಳನ್ನು ಮೊದಲು ರಾಜಕೀಯದಿಂದ ದೂರವಿರಿಸಬೇಕು.

---------------------

ಯಾರೂ ಪರಿಪೂರ್ಣರಲ್ಲ, ಎಲ್ಲರಲ್ಲಿಯೂ ಊನಗಳಿವೆ -ಬಾಬಾ ರಾಮ್‌ದೇವ್, ಯೋಗ ಗುರು

ತಮ್ಮ ಔಷಧಿಗಳ ವಿಷಯದಲ್ಲಿ ನೂರಕ್ಕೆ ನೂರು ಸತ್ಯ.

---------------------

ಭಾರತ ಭಯೋತ್ಪಾದನೆಗೆ ಗುರಿಯಾಗಿರುವ ದೇಶವಾಗಿದೆ - ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ

ಭಯೋತ್ಪಾದನೆಯನ್ನು ಉತ್ಪಾದಿಸುವ ದೇಶಗಳ ಸ್ನೇಹವನ್ನು ಮುರಿದು ಈ ಮಾತು ಹೇಳಬಾರದೇ?

---------------------

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ - ಸಿದ್ದರಾಮಯ್ಯ, ಮುಖ್ಯಮಂತ್ರಿ

ಅಂದರೆ ಗೆದ್ದ ಬಳಿಕ ಟಿಕೆಟ್ ಕೊಡುವ ಉದ್ದೇಶವೇ?

---------------------

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾನು ಲಾಬಿ ಮಾಡಿಲ್ಲ - ಎಸ್.ಆರ್.ಪಾಟೀಲ್, ಮಾಜಿ ಸಚಿವ

ಮತ್ತಾವ ಸ್ಥಾನಕ್ಕೆ ಮಾಡಿದ್ದೀರಿ ಎನ್ನುವುದನ್ನಾದರೂ ಹೇಳಿ.

---------------------

ಜಾತಿ ಎಂಬುದು ಸಮಾಜದ ಸೃಷ್ಟಿಯೇ ಹೊರತು ದೇವರು ಸೃಷ್ಟಿಸಿದ್ದಲ್ಲ - ಕೆ.ಗೋಪಾಲಭಂಡಾರಿ, ಮಾಜಿ ಸಚಿವ

ಮತ್ತೇಕೆ ಅದನ್ನು ನಿಮ್ಮ ಹೆಸರಿನ ಜೊತೆಗೆ ನೇತಾಡಿಸಿಕೊಂಡಿದ್ದೀರಿ?

---------------------

ಕೇಂದ್ರದ ಯೋಜನೆಗಳನ್ನು ಮನೆ ಮನೆಗೆ ಮುಟ್ಟಿಸಿ - ನಳಿನ್‌ಕುಮಾರ್ ಕಟೀಲು, ಸಂಸದ

ಈಗಾಗಲೇ ಆ ಬಿಸಿ ಎಲ್ಲರ ಮನೆಗಳಿಗೂ ಮುಟ್ಟಿದೆ.

---------------------

ಬಿಜೆಪಿ ಅಂದರೆ ವಿಕಾಸ, ಕಾಂಗ್ರೆಸ್ ಎಂದರೆ ವಿನಾಶ - ಅನಂತ್‌ಕುಮಾರ್, ಕೇಂದ್ರ ಸಚಿವ

ಬಿಜೆಪಿ ವಿಕಾಸ ಆದದ್ದು ನಿಜ. ಜನರು ವಿನಾಶವಾದದ್ದೂ ಅಷ್ಟೇ ಸತ್ಯ.

---------------------

ಮೇಲ್ವರ್ಗದವರು ದಲಿತರ ಮನೆಯ ಹೆಣ್ಣನ್ನು ತಂದು ನೆಂಟಸ್ಥಿಕೆ ಬೆಳೆಸಲಿ - ಡಾ.ಎಂ.ಚಿದಾನಂದಮೂರ್ತಿ, ಸಂಶೋಧಕ

ಅದಕ್ಕೇ ಶೋಭಾ ಕರಂದ್ಲಾಜೆಯವರು ಯಡಿಯೂರಪ್ಪರನ್ನು ಕಾವಲು ಕಾಯುತ್ತಿರುವುದು.

---------------------

ಗೋರಕ್ಷಕ ಗುಂಪುಗಳಿಗೂ ಬಿಜೆಪಿಗೂ ತಳಕು ಹಾಕುವುದು ಸರಿಯಲ್ಲ - ನಿತಿನ್ ಗಡ್ಕರಿ, ಕೇಂದ್ರ ಸಚಿವ

ಆ ಗುಂಪುಗಳನ್ನು ಗೂಂಡಾಕಾಯ್ದೆಯ ಜೊತೆಗೆ ನೀವೇ ತಳಕು ಹಾಕಬಹುದಲ್ಲ?

---------------------

ರಜನಿಕಾಂತ್ ಬೇರೆ ಪಕ್ಷಕ್ಕೆ ಸೇರುವ ಬದಲು ಬೇರೆ ಪಕ್ಷಗಳು ರಜನಿಕಾಂತ್ ಜೊತೆ ಸೇರಲಿ - ಶತ್ರುಘ್ನ ಸಿನ್ಹಾ, ಬಿಜೆಪಿ ನಾಯಕ

ಅಂದರೆ ಬಿಜೆಪಿ ರಜನಿಕಾಂತ್‌ನೊಳಗೆ ವಿಲೀನವಾಗಲಿದೆಯೇ?

---------------------

ನಾನಿನ್ನೂ ಕಾಂಗ್ರೆಸ್‌ನಲ್ಲಿದ್ದೇನೆ - ಎಚ್.ವಿಶ್ವನಾಥ್, ಮಾಜಿ ಸಚಿವ

ಆದರೆ ಅದಕ್ಕೇನಾದರೂ ಸಾಕ್ಷಗಳಿವೆಯೇ?

---------------------

ನರೇಂದ್ರ ಮೋದಿ ಸರಕಾರದ 3ವರ್ಷದ ಅವಧಿಯಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ - ಶೋಭಾ ಕರಂದ್ಲಾಜೆ,

ಸಂಸದೆ ಕಪ್ಪು ಹಾಳೆಯಲ್ಲಿ ಕಪ್ಪು ಚುಕ್ಕೆ ಹುಡುಕುವುದು ಕಷ್ಟ,

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...