ಉಪದೇಶ ನೀಡಿದ ತಂದೆಯ ಮೃತ್ಯು: ಮಗ ಪರಾರಿ
Update: 2017-05-29 10:46 GMT
ಬಾಗೇಪಲ್ಲಿ, ಮೇ 29: ತಂದೆ ಮತ್ತು ಮಗನ ನಡುವೆ ನಡೆದ ಜಗಳದಲ್ಲಿ ತಂದೆ ಮೌಲಾಸಾಬ್ (60) ಮೃತಪಟ್ಟಿರುವ ಪ್ರಕರಣ ತಾಲೂಕಿನ ಮಾರ್ಗಾನುಕುಂಟೆ ಗ್ರಾಮದಲ್ಲಿ ನಡೆದಿದೆ.
ಮೌಲಾಸಾಬ್ ಮತ್ತು ಮಗ ಅಝೀಝ್ (25) ನಡುವೆ ವಿನಾಕಾರಣ ಜಗಳ ನಡೆದಿತ್ತು. ಈ ಹಿನ್ನೆಯಲ್ಲಿ ತಂದೆ ಮಗನಿಗೆ ಬುದ್ದಿವಾದ ಹೇಳಿದ್ದರು. ಇದರಿಂದ ಕೆರಳಿದ ಮಗ ಅಝೀಝ್ ಬೊಲೋರೊ ವಾಹವನ್ನು ಹಿಂಬದಿಗೆ ತಿರುಗಿಸುವ ಅತುರದಲ್ಲಿ ವಾಹನದ ಹಿಂದೆ ಇದ್ದ ತಂದೆ ಮೇಲೆ ಹರಿದಿದ್ದು, ಮೌಲಾಸಾಬ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಝೀಝ್ ವಾಹನದೊಂದಿಗೆ ಪರಾರಿಯಾಗಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.