ಓ ಮೆಣಸೇ…!

Update: 2017-06-05 06:00 GMT

ದೌರ್ಜನ್ಯಕ್ಕೆ ಒಳಗಾದ ಮಹಿಳೆಯನ್ನು ಪುರುಷ ಅಧ್ಯಕ್ಷರು ವಿಚಾರಣೆ ನಡೆಸುವುದು ಸರಿಯಲ್ಲ - ತಾರಾ ಅನುರಾಧಾ, ವಿ.ಪ.ಸದಸ್ಯೆ

ವಿಚಾರಣೆ ನಡೆಸಬೇಕಾದುದು ದೌರ್ಜನ್ಯ ನಡೆಸಿದ ಪುರುಷರನ್ನಲ್ಲವೇ?

---------------------

ಅಸ್ಪಶ್ಯ ಮುಕ್ತ ಭಾರತ ನಿರ್ಮಿಸುವುದು ನಮ್ಮ ಪ್ರಮುಖ ಕಾಯಕ - ಪ್ರವೀಣ್ ತೊಗಾಡಿಯಾ, ವಿ.ಹಿಂ.ಪ. ಕಾರ್ಯಾಧ್ಯಕ್ಷ

ಅಂದರೆ ದಲಿತರ ಕೊಲೆಗಳು ಹೆಚ್ಚುತ್ತಿರುವ ಕಾರಣ ತಿಳಿಯಿತು ಬಿಡಿ.

---------------------

ನಾವು ತ್ಯಾಜ್ಯವನ್ನು ಕೇವಲ ಕಸ ಎಂದು ಪರಿಗಣಿಸಬಾರದು -ನರೇಂದ್ರ ಮೋದಿ,

ಪ್ರಧಾನಿ ಪ್ರಧಾನಿಯೆಂದೇ ಕರೆದಿದ್ದೇವೆ, ಸಾಲದೇ?

---------------------

 ದ.ಕ. ಜಿಲ್ಲೆಯ ಜನರು ಸೇವಾ ಮನೋಭಾವ ಉಳ್ಳವರು - ನಳಿನ್ ಕುಮಾರ್ ಕಟೀಲು,

 ಸಂಸದ ಉಚಿತವಾಗಿ ಜಿಲ್ಲೆಗೆ ಬೆಂಕಿ ಹಚ್ಚುವುದು ಯಾವ ಸೇವೆಯ ಭಾಗ?

---------------------

ಭಗವಾನ್ ಬಾಹುಬಲಿ ಮಹಾ ಕಾವ್ಯ ರಚನೆಯ ಈ ನಾಲ್ಕೂವರೆ ವರ್ಷಗಳಿಂದ ಮಾಂಸಾಹಾರ ತ್ಯಜಿಸಿದ್ದೇನೆ -ವೀರಪ್ಪ ಮೊಯ್ಲಿ, ಸಂಸದ

ಬಟ್ಟೆಯೂ ಧರಿಸದೆ ನಿಂತು ಕೊಂಡೇ ಬರೆದಿದ್ದೇನೆ ಎಂದಿಲ್ಲವಲ್ಲ, ಪುಣ್ಯ.

---------------------

ದ.ಕ. ಜಿಲ್ಲೆಯ ಪೊಲೀಸರು ಸರಿಯಾಗಿ ಕೆಲಸ ಮಾಡಿದ್ದರೆ ಕಲ್ಲಡ್ಕ ಪ್ರಭಾಕರ್ ಭಟ್ ಈ ಹೊತ್ತಿಗಾಗಲೇ ಜೈಲಿನಲ್ಲಿರಬೇಕಾಗಿತ್ತು - ಶ್ರೀರಾಮ ರೆಡ್ಡಿ, ಸಿಪಿಎಂ ರಾಜ್ಯ ಕಾರ್ಯದರ್ಶಿ

ಶಾಖೆಯಲ್ಲಿರಬೇಕಾದವರು ಪೊಲೀಸ್ ಠಾಣೆಯಲ್ಲಿ ಖಾಕಿ ಧರಿಸಿ ಕೂತರೆ ಇನ್ನೇನಾಗುತ್ತದೇ?

---------------------

ಈ ದೇವೇಗೌಡ ಏನೆಂಬುದನ್ನು ಕಾಲ ಬಂದಾಗ ತೋರಿಸುತ್ತೇನೆ - ದೇವೇಗೌಡ,ಮಾಜಿ ಪ್ರಧಾನಿ

ಕಾಲ ಎದುರು ಬಂದು ನಿಂತಾಗ ನಾವು ಏನನ್ನು ತೆಗೆದು ತೋರಿಸಿದರೂ ಪ್ರಯೋಜನವಿಲ್ಲ. 

---------------------

ಯಡಿಯೂರಪ್ಪ ಮೂರನೆ ಬಾರಿಗೆ ಮುಖ್ಯಮಂತ್ರಿಯಾಗುವುದು ನೂರಕ್ಕೆ ನೂರು ಖಚಿತ - ಅನಂತ್ ಕುಮಾರ್, ಕೇಂದ್ರ ಸಚಿವ

ಯಾವ ರಾಜ್ಯಕ್ಕೆ ಎನ್ನುವುದು ಇನ್ನೂ ನಿರ್ಧಾರವಾಗಿಲ್ಲವಂತೆ.

---------------------

ನನ್ನ ಮನೆಯ ಅಡುಗೆಯವಳು ದಲಿತ ಮಹಿಳೆ -ಯಡಿಯೂರಪ್ಪ, ಮಾಜಿ ಮುಖ್ಯ ಮಂತ್ರಿ

ಇಂತಹ ಹೇಳಿಕೆ ಕೊಟ್ಟದ್ದಕ್ಕೆ ದಲಿತರ ಮನೆಯಲ್ಲಿ ಮುನಿಸಿಕೊಂಡ ಶೋಭಾ ಅವರು ಊಟ ಮಾಡದೆ ಉಪವಾಸ ಎಂದದ್ದು.

---------------------

ಗೋ ಮಾರಾಟ ನಿಷೇಧ ಕಾಯ್ದೆ ಬಲವಂತದ ಮತಾಂತರದಂತಿದೆ - ಡಾ.ಎಚ್.ಸಿ.ಮಹದೇವಪ್ಪ ,

 ಸಚಿವ ಬಹುಶಃ ಗೋವುಗಳಿಗೆ ಬಲವಂತವಾಗಿ ಜನಿವಾರ ಹಾಕುವ ಪ್ರಯತ್ನ.

---------------------

ತೆರಿಗೆ ವಂಚಿಸುವವರಿಗೆ ಇನ್ನು ಉಳಿಗಾಲವಿಲ್ಲ - ಅರುಣ್ ಜೇಟ್ಲಿ, ಕೇಂದ್ರ ಸಚಿವ

ತೆರಿಗೆ ವಂಚನೆ ಒಂದು ಬಿಟ್ಟು ಉಳಿದೆಲ್ಲ ವಂಚನೆಗೆ ನಿಮ್ಮ ಸರಕಾರದಲ್ಲಿ ಅವಕಾಶವಿದೆ.

---------------------

ವ್ಯಕ್ತಿತ್ವವನ್ನು ರೂಪಿಸುವ ಶಕ್ತಿ ಇರುವುದು ಸಾಹಿತ್ಯಕ್ಕೆ ಮಾತ್ರ - ಕೋಟ ಶ್ರೀನಿವಾಸ ಪೂಜಾರಿ, ವಿ.ಪ. ಸದಸ್ಯ

ಹಾಗಾದರೆ ಒಂದಿಷ್ಟು ಸಾಹಿತ್ಯ ಓದಿ ಇನ್ನಾದರೂ ವ್ಯಕ್ತಿತ್ವ ರೂಪಿಸಿಕೊಳ್ಳಬಾರದೇ?

---------------------

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುವುದನ್ನು ತಡೆಯುವ ಶಕ್ತಿ ಈ ಭೂಮಿ ಮೇಲೆ ಯಾರಿಗೂ ಇಲ್ಲ - ಸಾಕ್ಷಿ ಮಹಾರಾಜ್,ಬಿಜೆಪಿ ಮುಖಂಡ

ಶ್ರೀರಾಮನಿಗೇ ನಿಮ್ಮ ಸವಾಲೇ?

---------------------

ಮೋದಿ ಮತ್ತು ಅಮಿತ್ ಶಾ ಆಟ ಕರ್ನಾಟಕದಲ್ಲಿ ನಡೆಯೋಲ್ಲ - ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

ಆಟಕ್ಕೆ ನಿಮ್ಮನ್ನು ಸೇರಿಸಿಕೊಂಡರೆ ಸಹಕರಿಸುತ್ತೀರಾ?

---------------------

ಚುನಾವಣೆ ಮುನ್ನ ಬಿಜೆಪಿ ನೀಡಿದ ಆಶ್ವಾಸನೆಗಳೆಲ್ಲಾ ಕೇವಲ ಲಾಲಿಪಾಪ್ ಎಂದು ಸಾಬೀತಾಗಿದೆ - ಉದ್ಧವ್ ಠಾಕ್ರೆ , ಶಿವ ಸೇನೆ ಮುಖ್ಯಸ್ಥ

ಲಾಲಿಪಾಪ್‌ನ್ನು ರಾಷ್ಟ್ರೀಯ ಆಹಾರವೆಂದು ಶೀಘ್ರವೇ ಘೋಷಿಸಲಿದ್ದಾರೆ.

---------------------

 ಬಹು ಸಂಖ್ಯಾತ ಮತೀಯವಾದ ದೇಶಕ್ಕೆ ಅಪಾಯ - ರಮಾನಾಥ ರೈ , ಸಚಿವ

 ಮತೀಯ ಹಿಂಸೆಯ ಸಂದರ್ಭದಲ್ಲಿ ನಿಮ್ಮ ಮೌನ ಅವೆಲ್ಲಕ್ಕಿಂತ ಅಪಾಯ.

---------------------

 ಗೃಹ ಖಾತೆ ತಪ್ಪುವುದರಿಂದ ಬೇಸರವಿಲ್ಲ - ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ

 ಬೇಸರವೆಲ್ಲ ಮುಖ್ಯಮಂತ್ರಿ ಹುದ್ದೆ ತಪ್ಪಿರುವುದಕ್ಕೆ ಅಲ್ಲವೇ?

---------------------

 ಇಂದು ಹೆಚ್ಚಿನವರಿಗೆ ಹಳೆಯದು ಬೇಡವಾಗಿದೆ - ವಿಶ್ವೇಶ ತೀರ್ಥ ಸ್ವಾಮೀಜಿ,ಪೇಜಾವರ ಮಠ

ಹೌದು. ಹಳೆಯದು ಬೇಡವೆಂದೇ ಮನುಶಾಸ್ತ್ರವನ್ನು ತಿರಸ್ಕರಿಸಿ, ಸಂವಿಧಾನವನ್ನು ಸ್ವೀಕರಿಸಿದ್ದು.

---------------------

 ಗೋ ರಕ್ಷಣೆಗಾಗಿ ಬಂದೂಕು ಹಿಡಿಯಲೂ ಸಿದ್ಧ - ಬಸವನಗೌಡ ಪಾಟೀಲ ಯತ್ನಾಳ್,  ವಿ.ಪ. ಸದಸ್ಯ

ಬಂದೂಕು ಹಿಡಿದು ಗಡಿಗೆ ತೆರಳಿ ದೇಶರಕ್ಷಣೆ ಮಾಡಬಾರದೇ?

---------------------

ಗಂಡು ನವಿಲು ಆಜೀವ ಬ್ರಹ್ಮಚಾರಿ -ನ್ಯಾ.ಶರ್ಮಾ,ರಾಜಸ್ಥಾನ ಹೈಕೋರ್ಟ್ ನ್ಯಾಯಮೂರ್ತಿ

ಬಹುಶಃ ನರೇಂದ್ರ ಮೋದಿಯವರಂತೆ.

---------------------

 ನಾವೇನು ಬಿಜೆಪಿಯವರ ಹಾಗೆ ಬೀದಿಯಲ್ಲಿ ಜಗಳ ಆಡುವುದಿಲ್ಲ - ದಿನೇಶ್ ಗುಂಡೂರಾವ್,

 ಕೆಪಿಪಿಸಿ ಕಾರ್ಯಾಧ್ಯಕ್ಷ ಅಂದರೆ ಮನೆಯೊಳಗೆ ಜಟಾಪಟಿ ನಡೆಯುತ್ತದೆ ಎಂದಾಯಿತು.

---------------------

 2019ರಲ್ಲಿ ನರೇಂದ್ರ ಮೋದಿಯನ್ನು ಪ್ರಧಾನಿಯನ್ನಾಗಿ ಮಾಡಲು ಶಕ್ತಿ ಮೀರಿ ಶ್ರಮಿಸುತ್ತೇನೆ - ಗಾಲಿ ಜನಾರ್ದನ ರೆಡ್ಡಿ,

  ಮಾಜಿ ಸಚಿವ ಜೈಲಿಗೆ ಹೋಗದಂತೆ ಶಕ್ತಿ ಮೀರಿ ಶ್ರಮಿಸಿ ಎಂದು ದಿಲ್ಲಿ ಬಿಜೆಪಿ ವರಿಷ್ಠರಿಗೆ ಮನವಿಯೇ?

---------------------

 ಕೇಂದ್ರ ಸರಕಾರಕ್ಕೆ ಧೈರ್ಯ ಇದ್ದರೆ ಗೋ ಮಾಂಸ ರಫ್ತು ನಿಲ್ಲಿಸಲಿ - ಯು.ಟಿ.ಖಾದರ್, ಸಚಿವ

  ಗೋರಕ್ಷಕರ ಪರವಾಗಿ ಸುಪ್ರೀಂಕೋರ್ಟಿಗೆ ಹೇಳಿಕೆ ನೀಡುವಾಗ ನಿಮ್ಮ ಸರಕಾರದ ಧೈರ್ಯ ಎಲ್ಲಿತ್ತು?.

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...