ಮ್ಯಾನ್‌ಹೋಲ್‌ಗೆ ಇಳಿಯಬೇಡಿ ಪೌರ ಕಾರ್ಮಿಕರಿಗೆ ಜಾಗೃತಿ: ಸಚಿವ ಆಂಜನೇಯ

Update: 2017-06-08 13:45 GMT

ಬೆಂಗಳೂರು, ಜೂ. 8: ಮ್ಯಾನ್‌ಹೋಲ್ ಸ್ವಚ್ಛತೆಗೆ ಯಾವುದೇ ಕಾರಣಕ್ಕೂ ತೆರಳದಂತೆ ಪೌರ ಕಾರ್ಮಿಕರಿಗೆ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ತಿಳಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮ್ಯಾನ್‌ಹೋಲ್ ಒಳಗೆ ಇಳಿದರೆ ಏನೆಲ್ಲ ಅಪಾಯಗಳಾಗುತ್ತದೆ ಎಂಬುದನ್ನು ಸಾಕ್ಷಚಿತ್ರದ ಮೂಲಕ ಪೌರ ಕಾರ್ಮಿಕರಿಗೆ ಅರಿವು ಮೂಡಿಸಲಾಗುವುದು ಎಂದು ಹೇಳಿದರು.

ಮ್ಯಾನ್‌ಹೋಲ್‌ಗಳ ಒಳಗೆ ವಿಷಾನಿಲ ಇರುವುದರಿಂದ ವ್ಯಕ್ತಿ ಒಳಗೆ ಇಳಿದರೆ ಕೂಡಲೇ ಉಸಿರಾಟದ ಸಮಸ್ಯೆಯಾಗಲಿದೆ. ಅಲ್ಲದೆ, ಪ್ರಾಣಾಪಾಯ ಸಂಭವಿಸುತ್ತದೆ ಎಂಬ ಬಗ್ಗೆ ಸಾಕ್ಷಚಿತ್ರದ ಮೂಲಕ ಪೌರ ಕಾರ್ಮಿಕರನ್ನು ಜಾಗೃತರನ್ನಾಗಿ ಮಾಡಲಾಗುವುದು ಎಂದ ಅವರು, ಮ್ಯಾನ್‌ಹೋಲ್ ಒಳಗೆ ಇಳಿಯುವವರಿಗೆ ಅರಿವು ಅಗತ್ಯ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News