ದಾವಣಗೆರೆ : ಕರಾವೇಯಿಂದ ರಕ್ತದಾನ ಶಿಬಿರ
Update: 2017-06-09 12:47 GMT
ದಾವಣಗೆರೆ,ಜೂ.9 : ನಗರದ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಶುಕ್ರವಾರ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರ 51ನೇ ಜನ್ಮದಿನದ ಅಂಗವಾಗಿ ರಕ್ತದಾನ ಶಿಬಿರವನ್ನು ನಡೆಸಲಾಯಿತು. ಚಿಗಟೇರಿ ಜಿಲ್ಲಾಸ್ಪತ್ರೆಯ ಅಧೀಕ್ಷಕಿ ಡಾ.ಡಿ.ಎಚ್.ನೀಲಾಂಬಿಕೆ, ಕರವೇ ಜಿಲ್ಲಾಧ್ಯಕ್ಷ ಎಂ.ಎಸ್.ರಾಮೇಗೌಡ, ವಾಸುದೇವ ರಾಯ್ಕರ್, ಓ.ಮಹೇಶ್ವರಪ್ಪ, ಲೋಕೇಶ್, ಹನುಮಂತಪ್ಪ, ತಿಮ್ಮೇಶ್, ಬಸಮ್ಮ, ವಿಜಯೇಂದ್ರ ಇತರರು ಇದ್ದರು.