ಯುವ ಒಕ್ಕೂಟಗಳಿಂದ ಸ್ವಚ್ಛತಾ ಕಾರ್ಯ

Update: 2017-06-09 12:52 GMT

ಮಡಿಕೇರಿ ಜೂ.9 : ಜಿಲ್ಲಾ ಯುವ ಒಕ್ಕೂಟ, ನೆಹರು ಯುವ ಕೇಂದ್ರ ಹಾಗೂ ಮೂರು ತಾಲ್ಲೂಕು ಯುವ ಒಕ್ಕೂಟಗಳು ನಗರದಲ್ಲಿ ಸ್ವಚ್ಛ ಭಾರತ ಅಭಿಯಾನ ನಡೆಸಿದವು. ನಗರದ ಗಾಂಧಿ ಮೈದಾನ ಹಾಗೂ ರಾಜಾಸೀಟು ರಸ್ತೆ ಸುತ್ತಮುತ್ತ ಬಿದ್ದಿದ್ದ ತ್ಯಾಜ್ಯಗಳನ್ನು ತೆಗೆದು ಸ್ವಚ್ಛತಾ ಕಾರ್ಯ ನಡೆಸಿದ ಪದಾಧಿಕಾರಿಗಳು ಹಾಗೂ ಸದಸ್ಯರು ಸಾರ್ವಜನಿಕರಲ್ಲಿ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಿದರು.

ಯುವ ಒಕ್ಕೂಟಗಳ ಸಹಕಾರದೊಂದಿಗೆ ಇನ್ನು ಮುಂದೆಯೂ ಜಿಲ್ಲೆಯಲ್ಲಿ ಸ್ವಚ್ಛತಾ ಜಾಗೃತಿ ಅಭಿಯಾನಗಳನ್ನು ನಡೆಸಲಾಗುವುದೆಂದು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷರಾದ ಎಂ.ಬಿ.ಜೋಯಪ್ಪ ತಿಳಿಸಿದರು.

ಮೂರೂ ತಾಲ್ಲೂಕು ಯುವ ಒಕ್ಕೂಟಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News