ಬಂದ್ ಗೆ ಜಯಕರ್ನಾಟಕ ಸಂಘಟನೆ ಬೆಂಬಲವಿಲ್ಲ: ಕೃಷ್ಣ ಹುಲಗಿ

Update: 2017-06-11 14:22 GMT

ಶಿಕಾರಿಪುರ, ಜೂ. 11: ಮಹದಾಯಿ ನದಿ ನೀರಿಗಾಗಿ ಬಂದ್ ಕರೆಯನ್ನು ಜಯಕರ್ನಾಟಕ ಸಂಘಟನೆ ಬೆಂಬಲಿಸುವುದಿಲ್ಲ ಎಂದು ಸಂಘಟನೆಯ ತಾಲೂಕು ಅಧ್ಯಕ್ಷ ಕೃಷ್ಣ ಹುಲಗಿ ತಿಳಿಸಿದ್ದಾರೆ.

ಪತ್ರಿಕಾ ಹೇಳಿಕೆಯಲ್ಲಿ ಈ ಬಗ್ಗೆ ತಿಳಿಸಿರುವ ಅವರು ಮಹದಾಯಿ ನದಿ ನೀರಿಗಾಗಿ ವಿವಿಧ ಕನ್ನಡಪರ ಸಂಘಟನೆಗಳು ಸೋಮವಾರ ಕರೆ ನೀಡಿರುವ ರಾಜ್ಯ ಬಂದ್ ಗೆ ಜಯಕರ್ನಾಟಕ ಬೆಂಬಲಿಸುವುದಿಲ್ಲ ಎಂದರು.

ಬಂದ್ ನಿಂದ ಸ್ಥಳೀಯ ಜನಜೀವನ ಅಸ್ತವ್ಯಸ್ಥವಾಗಿ ಸಮಸ್ಯೆ ಹೆಚ್ಚಾಗುವ ಸಾಧ್ಯತೆಯಿದ್ದು ಈ ದಿಸೆಯಲ್ಲಿ ಸಂಘಟನೆ ಬಂದ್ ಕರೆಯನ್ನು ವಿರೋಧಿಸುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News