ಕಾರು ಢಿಕ್ಕಿ:ಕಾರ್ಮಿಕ ಮಹಿಳೆ ಮೃತ್ಯು, ಮತ್ತೊಬ್ಬಳು ಗಂಭೀರ

Update: 2017-06-18 14:46 GMT

ಮದ್ದೂರು, ಜೂ.18: ಕಾರು ಢಿಕ್ಕಿ ಹೊ ಡೆದುಓರ್ವ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿ, ಮತ್ತೊಬ್ಬಳು ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಸೋಮನಹಳ್ಳಿ ಬಳಿ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ರವಿವಾರ ಬೆಳಗ್ಗೆ ನಡೆದಿದೆ.

ಸೋಮನಹಳ್ಳಿ ಕೈಗಾರಿಕಾ ಪ್ರದೇಶದ ಗಾರ್ಮೆಂಟ್ಸ್ ಕಾರ್ಖಾನೆಗೆ ಕೆಲಸಕ್ಕೆ ತೆರಳಲು ಹೆದ್ದಾರಿ ದಾಟುತ್ತಿದ್ದಾಗ ಈ ದುರ್ಘಟನೆ ನಡೆದಿದ್ದು, ತಾಲೂಕಿನ ತೊಪ್ಪನಹಳ್ಳಿಯ ಪ್ರಮೀಳಾ(25) ಸಾವನ್ನಪ್ಪಿದ್ದರೆ, ತೀವ್ರವಾಗಿ ಗಾಯಗೊಂಡ ಕಬ್ಬಾರೆ ಗ್ರಾಮದ ಶಿಲ್ಪ ಅವರನ್ನು ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್‌ಗೆ ಸಾಗಿಸಲಾಗಿದೆ.
ಎಂದಿನಂತೆ ತಮ್ಮ ಗ್ರಾಮದಿಂದ ಆಗಮಿಸಿ ಹೆದ್ದಾರಿ ದಾಟುತ್ತಿದ್ದ ಈ ಮಹಿಳೆಯರಿಗೆ ಬೆಂಗಳೂರಿನಿಂದ ಮೈಸೂರು ಕಡೆಗೆ ವೇಗವಾಗಿ ಚಲಿಸುತ್ತಿದ್ದ ಕಾರು ಢಿಕ್ಕಿಯೊಡೆದಿದ್ದು, ಮದ್ದೂರು ಸಂಚಾರಿ ಪೊಲೀಸರು ಚಾಲಕನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News