ಅಬಕಾರಿ ದಾಳಿ: ಆರೋಪಿ ಪರಾರಿ
Update: 2017-06-20 20:09 IST
ಮೂಡಿಗೆರೆ, ಜೂ.20:ತಾಲೂಕಿನ ಬಣಕಲ್ ಹೋಬಳಿ ಕೂಡಹಳ್ಳಿ ಗ್ರಾಮದಲ್ಲಿ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಮನೆಯೊಂದರಲ್ಲಿ 20 ಲೀಟರ್ ಬೆಲ್ಲದ ಕೊಳೆ ಹಾಗೂ 1 ಲಿ. ಕಳ್ಳಬಟ್ಟಿ ಸಾರಾಯಿ ವಶಪಡಿಸಿಕೊಂಡಿದ್ದಾರೆ.
ದಾಳಿ ನಡೆಸುವ ವೇಳೆ ಆರೋಪಿ ಮಹಿಳೆಮ ಉಮ ತಲೆಮರೆಸಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಅಬಕಾರಿ ಉಪ ಅಧೀಕ್ಷಕ ಸಂತೋಷ್, ನಿರೀಕ್ಷಕರುಗಳಾದ ಆನಂದ್ ಜೆ.ಡಿ, ಚಂದ್ರಶೇಖರ್, ಉಪನಿರೀಕ್ಷಕ ಪಾಂಡುರಂಗ ಎಚ್.ಸಿ, ಹಾಗೂ ಸಿಬ್ಬಂದಿಗಳು ಮತ್ತಿತರರಿದ್ದರು.