ಕಾವ್ಯ ಮನೆ ಪ್ರಕಾಶನದಿಂದ "ಕಥೆಗಾರರಿಂದಲೇ ಕಥಾಸ್ಪರ್ಧೆ 2017"

Update: 2017-06-22 11:54 GMT

ಕಲಬುರಗಿ, ಜೂ.20: ಯುವ ಬರಹಗಾರರನ್ನು ಪ್ರೋತ್ಸಾಹಿಸುವ ಸಲುವಾಗಿ ಕಾವ್ಯ ಮನೆ ಪ್ರಕಾಶನವು "ಕಥೆಗಾರರಿಂದಲೇ ಕಥಾಸ್ಪರ್ಧೆ 2017"ನ್ನು ಹಮ್ಮಿಕೊಂಡಿದೆ. ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದವರಿಗೆ 5000 ರೂ., ದ್ವಿತೀಯ 3000 ರೂ. ಹಾಗೂ ತೃತೀಯ 2000 ರೂ. ಮತ್ತು ಮೆಚ್ಚುಗೆ ಪಡೆಯುವ 8 ಕಥೆಗಳಿಗೆ ಪುಸ್ತಕ ಬಹುಮಾನ ನೀಡಲಾಗುವುದು. 

ನಿಯಮಗಳು: 2017ರ ಆಗಸ್ಟ್ 10ರೊಳಗಾಗಿ ಕಥೆ ಕಳುಹಿಸಬೇಕು, ಕಥೆಗೆ ಯಾವುದೇ ಪದ ಮಿತಿಯಿಲ್ಲ, ಸ್ಪರ್ಧೆಗೆ ಬಂದ ಕಥೆಗಳನ್ನು ಯಾವುದೇ ರೀತಿಯಲ್ಲಿ ಬಳಸಿಕೊಳ್ಳುವ ಹಕ್ಕು ಆಯೋಜಕರದಾಗಿರುತ್ತದೆ, ಕಥೆಯು ಈ ಹಿಂದೆ ಎಲ್ಲಿಯೂ ಪ್ರಕಟವಾಗಿರಬಾರದು, ನುಡಿಯಲ್ಲಿ ಟೈಪ್ ಮಾಡಿ khumnabaade580@gmail.com ಇಮೇಲ್ ವಿಳಾಸಕ್ಕೆ ಕಥೆಯನ್ನು ಕಳುಹಿಸಬೇಕು. ಝೆರಾಕ್ಸ್ ಪ್ರತಿಗಳನ್ನು ಸ್ವೀಕರಿಸುವುದಿಲ್ಲ

ಕೈಬರಹದಲ್ಲಿ ಕಳುಹಿಸುವರು " ಕಥೆಗಾರರಿಂದಲೆ ಕಥಾಸ್ಪರ್ಧೆ"ಯೆಂದು ಲಕೋಟೆ ಮೆಲೆ ಬರೆದು ಕಾವ್ಯ ಮನೆ ಪ್ರಕಾಶನ, ಪ್ಲಾಟ್ ನಂ-220, ಶಿವ ನಿಲಯ, 1ನೇ ಬ್ಲಾಕ್, ವಿರೇಂದ್ರ ಪಾಟೀಲ ಬಡಾವಣೆ, ಸೇಡಂ ರೋಡ್, ಕಲಬುರ್ಗಿ -585105 ಈ ವಿಳಾಸಕ್ಕೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮೊ.ಸಂ. 7829464653 ಹಾಗೂ 9900727834ನ್ನು ಸಂಪರ್ಕಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News