ಅರಣ್ಯ ಇಲಾಖೆಯ ಚಾಲಕ ಆತ್ಮಹತ್ಯೆ
Update: 2017-06-22 14:27 GMT
ಮಡಿಕೇರಿ, ಜೂ.22 : ಅರಣ್ಯ ಇಲಾಖೆಯ ಚಾಲಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಡಿಕೇರಿಯ ಅರಣ್ಯ ಭವನದಲ್ಲಿ ನಡೆದಿದೆ.
ಸಕಲೇಶಪುರದ ಅರಣ್ಯ ಇಲಾಖೆ ಕಚೇರಿಯಲ್ಲಿ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಂಜುನಾಥ್ (50) ಆತ್ಮಹತ್ಯೆ ಮಾಡಿಕೊಂಡವರು ಎಂದು ಗುರುತಿಸಲಾಗಿದೆ. ಅವರು ಸಕಲೇಶಪುರದಲ್ಲಿ 25 ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ಚಾಲಕನಾಗಿದ್ದರು. ಬುಧವಾರ ರಾತ್ರಿ ಎಸಿಎಫ್ ಪೂರ್ಣಿಮಾ ಅವರನ್ನು ಮಡಿಕೇರಿಗೆ ಬಿಡಲು ಆಗಮಿಸಿದ್ದರು. ಇಂದು ಬೆಳಗ್ಗೆ ಅರಣ್ಯ ಭವನದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಮಂಜುನಾಥ್ ಅವರ ಮೃತದೇಹ ಪತ್ತೆಯಾಗಿದೆ.
ಅಧಿಕಾರಿಗಳು ಪತಿಗೆ ಕಿರುಕುಳ ನೀಡುತ್ತಿದ್ದರು, ಕಳೆದ 3 ತಿಂಗಳಿನಿಂದ ಸಂಬಳವೂ ಸರಿಯಾಗಿ ಸಿಗುತ್ತಿರಲಿಲ್ಲ ಎಂದು ಮಂಜುನಾಥ್ ಅವರ ಪತ್ನಿ ಪದ್ಮಾಕ್ಷಿ ಆರೋಪಿಸಿ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.