ಸಹೋದರನ ಹತ್ಯೆ: ಅಪರಾಧಿಗೆ ಜೀವಾವಧಿ ಶಿಕ್ಷೆ

Update: 2017-06-23 14:32 GMT

ಚಿಕ್ಕಮಗಳೂರು, ಜೂ. 23: ಆಸ್ತಿ ವಿಚಾರಕ್ಕಾಗಿ ಸಹೋದರನನ್ನೇ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ನಗರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವುತೀರ್ಪು ನೀಡಿದೆ.

ಕಡೂರು ತಾಲೂಕಿನ ಪಂಚನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ 2016 ಮಾ. 25 ರಂದು ಮರುಳಪ್ಪ ಎಂಬಾತನು ತನ್ನ ಅಣ್ಣ ರಮೇಶನನ್ನು ಕೊಲೆ ಮಾಡಿದ್ದನು. ಆಸ್ತಿಯಲ್ಲಿ ತನಗೆ ಪಾಲು ನೀಡಿಲ್ಲ ಎಂದು ದಿನಂಪ್ರತಿ ಪೀಡಿಸುತ್ತಿದ್ದು, ನಂತರ ಕೊಲೆ ಮಾಡಿರುವುದಾಗಿ ದೂರು ದಾಖಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಶ್ರೀಮತಿ ಪ್ರಭಾವತಿ ಎಂ. ಹಿರೇಮಠ್‌ರವರು ಮರುಳಪ್ಪನಿಗೆ ಜೀವಾವಧಿ ಶಿಕ್ಷೆ ಹಾಗೂ 5,000 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜನಕ ಕೆ.ಕೆ.ಕುಲಕರ್ಣಿ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News